ರುದ್ರಮುನಿಗೆ ಪಿಎಚ್ ಡಿ
ಶಿವಮೊಗ್ಗ : ಚಿತ್ರದುರ್ಗ ತಾಲೂಕು ಬಸವನ ಶಿವನಕೆರೆಯ ಪಿ.ಬಿ.ರುದ್ರಮುನಿ ಮಂಡಿಸಿದ ‘ಪರ್ಫಾರ್ಮೆನ್ಸ್ ಇವ್ಯಾಲುಯೇಷನ್ ಆಫ್ ಕ್ರಾಪ್ ಇನ್ಸೂರೆನ್ಸ್ ಸ್ಕೀಮ್ಸ್ - ಎ ಕೇಸ್ ಸ್ಟಡಿ ಆಫ್ ಚಿತ್ರದುರ್ಗ ಡಿಸ್ಟ್ರಿಕ್ಟ್’ ಪ್ರೌಢಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯ ವು ಪಿಎಚ್ ಡಿ ಘೋಷಿಸಿದೆ. ಇವರಿಗೆ ಕುವೆಂಪು ವಿಶ್ವವಿದ್ಯಾಲಯ ವಾಣಿಜ್ಯಶಾಸ್ತ್ರ ವಿಭಾಗದ ಅಧ್ಯಕ್ಷ ಪ್ರೊ. ಎಸ್ .ವೆಂಕಟೇಶ್ ಮಾರ್ಗದರ್ಶನ ಮಾಡಿದ್ದರು.
ಭಾವಚಿತ್ರವಿದೆ: 14ಎಸ್ ಎಂಜಿ39
ಆಶ್ರಿಕಾಗೆ 2 ಚಿನ್ನದ ಪದಕ
ಶಿವಮೊಗ್ಗ: ಹೈದರಾಬಾದ್ ನ ಗಚ್ಚಿ ಬೌಲಿ ಒಳಕ್ರೀಡಾಂಗಣದಲ್ಲಿನಡೆದ ಅಖಿಲ ಭಾರತ ಮಾಸ್ಟರ್ ಸ್ವಿಮ್ಮಿಂಗ್ ನ್ಯಾಷನಲ್ ಚಾಂಪಿಯನ್ ಶಿಪ್ ನಲ್ಲಿಶಿವಮೊಗ್ಗ ಸಿಟಿ ಕ್ಲಬ್ ಎಲೈಟ್ ನ ಈಜು ತರಬೇತುದಾರರಾದ ಆಶ್ರಿಕಾ ದೀಪಕ್ ಹೆಗಡೆ ಎರಡು ವಿಭಾಗಗಳಲ್ಲಿಪ್ರಥಮ ಸ್ಥಾನದೊಂದಿಗೆ ಡಬಲ್ ಚಿನ್ನದ ಪದಕ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಸಾಧನೆಯೊಂದಿಗೆ ಅವರು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಭಾವಚಿತ್ರವಿದೆ: 14ಎಸ್ ಎಂಜಿ40

