ವಿಕ ಸುದ್ದಿಲೋಕ ಬೆಂಗಳೂರು ‘‘ಹಣೆಯಲ್ಲಿಬರೆದಿದ್ದರೆ ನನ್ನ ಅಣ್ಣ ರಾಜ್ಯದ ಮುಖ್ಯಮಂತ್ರಿ ಆಗುತ್ತಾರೆ, ಹಣೆಬರಹದಲ್ಲಿಇಲ್ಲಎಂದರೆ ಏನು ಮಾಡಿದರೂ ಆಗಲ್ಲ,’’ ಎಂದು ಡಿಸಿಎಂ ಸಹೋದರ ಡಿ.ಕೆ.ಸುರೇಶ್ ಹೇಳಿದ್ದಾರೆ. ‘‘ಸಹೋದರ ಡಿ.ಕೆ.ಶಿವಕುಮಾರ್ ಅವರನ್ನು ಸಿಎಂ ಮಾಡುವ ವಿಚಾರ ದಲ್ಲಿಶಸ್ತ್ರವನ್ನೇ ಹಿಡಿದಿಲ್ಲ. ಹಾಗಾಗಿ, ಶಸ್ತ್ರತ್ಯಾಗದ ಪ್ರಶ್ನೆಯೂ ಉದ್ಭವಿಸುವುದಿಲ್ಲ. ಇದು ರಾಜಕಾರಣ, ಶಸ್ತ್ರ ಮತ್ತು ಅಸ್ತ್ರ ಎರಡೂ ಬೇಕಾಗಿಲ್ಲ. ಈಗಲೂ ತಾಳ್ಮೆಯೇ ಮುಖ್ಯ’’ ಎಂದು ಹೇಳಿದ್ದಾರೆ. ಡಿಸಿಎಂ ಪರವಾಗಿ ಕಾಂಗ್ರೆಸ್ ನ ಕೆಲವು ಶಾಸಕರು ಡಿನ್ನರ್ ಮೀಟಿಂಗ್ ನಡೆಸಿ, ಮುಂದಿನ ಕಾರ್ಯ ತಂತ್ರದ ಕುರಿತು ಚರ್ಚೆ ನಡೆಸಿರುವ ಬೆನ್ನಲ್ಲೇ ಡಿ.ಕೆ.ಸುರೇಶ್ ಅವರ ಈ ಹೇಳಿಕೆ ಗಮನ ಸೆಳೆದಿದೆ. ನಗರದಲ್ಲಿಸುದ್ದಿಗಾರರೊಂದಿಗೆ ಮಾತನಾಡಿದ ಡಿಧಿಕೆಧಿಸು, ‘‘ಶಾಸಕರು ಡಿಸಿಎಂ ಪರವಾಗಿ ಮೀಟಿಂಗ್ ಮಾಡಿರುವುದು ಹಾಗೂ ನಾಯಕತ್ವ ಬದಲಾವಣೆ ವಿಚಾರವಾಗಿ ಹೈಕಮಾಂಡ್ ಭೇಟಿಗಾಗಿ ದಿಲ್ಲಿಗೆ ಹೋಗು ವುದು ಸೇರಿ ಯಾವ ಮಾಹಿತಿಯೂ ನನಗಿಲ್ಲ. ಇದು ಶಾಸಕರ ವೈಯಕ್ತಿಕ ವಿಚಾರ ಮತ್ತು ಪಕ್ಷ ಇದನ್ನು ಗಮನಿಸಲಿದೆ,’’ ಎಂದು ಹೇಳಿದರು.

