ರಸ್ತೆ ವಿಸ್ತರಣೆಗೆ ಮರ ತೆರವಿಗೆ ಸಹಕರಿಸಲು ಮನವಿ
ಮಾಲೂರು: ನಗರದ ಮುಖ್ಯ ರಸ್ತೆಯ ಎರಡು ಬದಿಗಳಲ್ಲಿ ರಾಜ್ಯ ಹೆದ್ದಾರಿ ಅಭಿವೃದ್ಧಿ ನಿಗಮದಿಂದ ಕೈಗಾರಿಕಾ ಕಾರಿಡಾರ್ ರಸ್ತೆಯ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಮುಖ್ಯ ರಸ್ತೆಯ ಎರಡು ಬದಿಗಳ ವಿಸ್ತರಣೆಗೆ ಮರಗಳನ್ನು ತೆಗೆಯಲು ಸರಕಾರ ಆದೇಶಿಸಿದ್ದು ಏ.10ರ ಗುರುವಾರ ಬೆಳಗ್ಗೆ 11.30 ರಿಂದ 2 ಗಂಟೆ ವರೆಗೆ ನಗರ ಸೇರಿದಂತೆ ಕೊಡೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿ ಅರಳೇರಿ, ದ್ಯಾಪಸಂದ್ರ, ಚನ್ನಕಲ್ , ಸಂತೆಹಳ್ಳಿ, ರೈಲ್ವೆ ಸೇತುವೆ ಬಳಿ ಇರುವ ಸಮತಾ ನಗರ ಇಂದಿರಾನಗರ ಪ್ರದೇಶಗಳಲ್ಲಿವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗಿದೆ. ಗ್ರಾಹಕರು ಸಹಕರಿಸುವಂತೆ ಬೆಸ್ಕಾಂನ ಸಹಾಯಕ ಕಾರ್ಯಪಾಲಕ ಅಭಿಯಂತರ ಆನ್ಸರ್ ಭಾಷಾ ಮನವಿ ಮಾಡಿದ್ದಾರೆ.

