ಸಂಗಮೇಶ್ವರ ಅದ್ಧೂರಿ ರಥೋತ್ಸವ
ಕೂಡಲಸಂಗಮ: ಕ್ಷೇತ್ರಾಧಿಪತಿ ಸಂಗಮನಾಥನ ರಥೋತ್ಸವ ಸಂಭ್ರಮದಿಂದ ಮಂಗಳವಾರ ಸಂಜೆ ನಡೆಯಿತು. ರಾಜ್ಯದ ನಾನಾ ಭಾಗದ ಅಪಾರ ಭಕ್ತರು ಉತ್ಸವದಲ್ಲಿಭಾಗಿಯಾಗಿ ರಥ ಎಳೆದು ಸಂಭ್ರಮಿಸಿದರು.
ರಥೋತ್ಸವಕ್ಕೂ ಮುನ್ನ ಗಂಜಿಹಾಳದಿಂದ ತಳಿರು ತೋರಣ, ನಂದಿಕೋಲು, ಬಾಳೆ ಕಂಬ , ಬೆಳಗಲ್ಲದಿಂದ ರಥದ ಹಗ್ಗ, ಇದ್ದಲಗಿಯಿಂದ ಹಿಲಾಲ, ಗುಳೇದಗುಡ್ಡದ ಹುಚ್ಚಯ್ಯನ ಕಳಸವನ್ನು ಮೆರವಣಿಗೆ ಮೂಲಕ ತರಲಾಯಿತು.
ಜಾತ್ರೆ ವೇಳೆ ವಾಹನ ದಟ್ಟನೆ ಅಧಿಕವಾಗಿತ್ತು. ರಸ್ತೆ ಮಧ್ಯೆ ಟ್ರ್ಯಾಕ್ಟರ್ ಗಳು ನಿಂತ ಪರಿಣಾಮ ಭಕ್ತರು ಸಂಚರಿಸಲು ತೊಂದರೆ ಅನುಭವಿಸಿದರು.
6 ಗಂಟೆ ಬದಲು 7.10ಕ್ಕೆ ರಥೋತ್ಸವ:
ಸಂಜೆ 6 ಗಂಟೆಗೆ ಆರಂಭವಾಗಬೇಕಿದ್ದ ರಥೋತ್ಸವಕ್ಕೆ 7.10 ಗಂಟೆಗೆ ಕತ್ತಲೆಯಲ್ಲಿಚಾಲನೆ ನೀಡಿದ್ದರಿಂದ ಭಕ್ತರು ಆಡಳಿತ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜಾತ್ರೆಯಲ್ಲಿಅಧಿಕ ಜನರು ಸೇರಿದ್ದರಿಂದ ಮೊಬೈಲ್ ನೆಟ್ ವರ್ಕ್ ಜಾಮ್ ಆಗಿ ಸಂಪರ್ಕಕ್ಕೆ ತೊಂದರೆ ಅನುಭವಿಸಿದರು.
-------------
ಚಿತ್ರ ವಿವರ
7 ಕೆ.ಯು.ಡಿ.ಎಲ್ 2
ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮ ಕ್ಷೇತ್ರಾಧಿಪತಿ ಸಂಗಮನಾಥ ರಥೋತ್ಸವ ಮಂಗಳವಾರ ಅದ್ಧೂರಿಯಿಂದ ನಡೆಯಿತು.

