ಸಾಬೂನು ಕಾರ್ಮಿಕರ ಸಂಘದಿಂದ ಎಂಬಿಪಿಗೆ ಅಭಿನಂದನೆ

Contributed byshashidhar.nandikal@timesgroup.com|Vijaya Karnataka

ಕೆಎಸ್‌ಡಿಎಲ್‌ 2025-26ನೇ ಸಾಲಿನಲ್ಲಿ 507 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಈ ಹಿನ್ನೆಲೆಯಲ್ಲಿ ಸಾಬೂನು ಕಾರ್ಮಿಕರ ಸಂಘವು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಅವರನ್ನು ಅಭಿನಂದಿಸಿದೆ. 110 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 2 ಸಾವಿರ ಕೋಟಿ ರೂ.ಗೂ ಅಧಿಕ ವಹಿವಾಟು ನಡೆದಿದೆ. 47,494 ಮೆಟ್ರಿಕ್‌ ಟನ್‌ ಉತ್ಪಾದನೆ ಸಾರ್ವಕಾಲಿಕ ದಾಖಲೆಯಾಗಿದೆ. ಸಂಸ್ಥೆಯ ಅಭಿವೃದ್ಧಿಗೆ ನೇರ ನೇಮಕದ ಮೂಲಕ ಸಿಬ್ಬಂದಿ ಭರ್ತಿ ಮಾಡಲು ಸಂಘ ಒತ್ತಾಯಿಸಿದೆ.

congratulations to mb patil from soap workers union a new record in 110 years of history

ವಿಕ ಸುದ್ದಿಲೋಕ

ಬೆಂಗಳೂರು: ರಾಜ್ಯ ಸಾಬೂನು ಮತ್ತು ಮಾರ್ಜಕಗಳ ನಿಯಮಿತವು(ಕೆಎಸ್ ಡಿಎಲ್ ) 2025-26ನೇ ಸಾಲಿನಲ್ಲಿ507 ಕೋಟಿ ರೂ. ನಿವ್ವಳ ಲಾಭ ದಾಖಲಿಸಿದ್ದರಿಂದ ಸಾಬೂನು ಕಾರ್ಖಾನೆ ಕಾರ್ಮಿಕರ ಸಂಘವು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರನ್ನು ಅಭಿನಂದಿಸಿದೆ.

ಸಂಘದ ಅಧ್ಯಕ್ಷ ಮೈಕೇಲ್ ಫರ್ನಾಂಡೀಸ್ ನೇತೃತ್ವದಲ್ಲಿಸಚಿವರನ್ನು ಭೇಟಿಯಾದ ಸಂಘದ ಪದಾಧಿಕಾರಿಗಳು, ‘‘ಸಂಸ್ಥೆಯ 110 ವರ್ಷಗಳ ಇತಿಹಾಸದಲ್ಲಿಇದೇ ಮೊದಲ ಬಾರಿಗೆ 2 ಸಾವಿರ ಕೋಟಿ ರೂ.ಗೂ ಹೆಚ್ಚಿನ ವಹಿವಾಟು ನಡೆಸಲಾಗಿದೆ. 47,494 ಮೆಟ್ರಿಕ್ ಟನ್ ಉತ್ಪಾದನೆ ಮಾಡಲಾಗಿದೆ. ಇದೊಂದು ಸಾರ್ವಕಾಲಿಕ ದಾಖಲೆಯಾಗಿದೆ. ಸಚಿವರ ಮುತುವರ್ಜಿ, ದೂರದೃಷ್ಟಿಯಿಂದ ಇದು ಸಾಧ್ಯವಾಗಿದೆ. ಜತೆಗೆ ಕೆಎಸ್ ಡಿಎಲ್ ಅಧ್ಯಕ್ಷ ಸಿ.ಎಸ್ .ನಾಡಗೌಡ, ಸಂಸ್ಥೆಯ ಅಧಿಕಾರಿಗಳ ಪಾತ್ರವೂ ಇದೆ,’’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನೇಮಕ ಮಾಡಿ: ಸಂಸ್ಥೆಯನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯಲು ಸಿಬ್ಬಂದಿಯ ಅಗತ್ಯವಿದೆ. ನೇರ ನೇಮಕದ ಮೂಲಕ ಸಿಬ್ಬಂದಿ ಭರ್ತಿ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.