ಕಾನೂನು ಸುವ್ಯವಸ್ಥೆ ಕಾಪಾಡಿ
ವಿಕ ಸುದ್ದಿಲೋಕ ಬೀಳಗಿ
‘‘ಹೋಳಿ ಹಬ್ಬವನ್ನು ಸಾಮರಸ್ಯ ಮತ್ತು ಸೌಹಾರ್ದತೆಯಿಂದ ಆಚರಿಸಬೇಕು. ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ಕಾನೂನು ಸುವ್ಯವಸ್ಥೆ ಕಾಪಾಡಬೇಕು’’ ಎಂದು ಸಿಪಿಐ ಹಣಮಂತ ಸಣಮನಿ ಹಾಗೂ ತಹಸೀಲ್ದಾರ್ ವಿನೋದ ಹತ್ತಳ್ಳಿ ಹೇಳಿದರು.
ಬೀಳಗಿ ಪೊಲೀಸ್ ಠಾಣೆ ಆವರಣದಲ್ಲಿಹೋಳಿ ಹಾಗೂ ರಂಜಾನ ಶಾಂತಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
‘‘ಬೇರೆಯವರಿಗೆ ತೊಂದರೆಯಾಗದಂತೆ ಹೋಳಿ ಆಡಬೇಕು. ಪಿಯು ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಎಚ್ಚರ ವಹಿಸಬೇಕು’’ ಎಂದರು.
ರಾಜು ಬೋರ್ಜಿ, ಮುತ್ತು ಬೋರ್ಜಿ, ಸಂಗಪ್ಪ ಗಾಳಿ, ನಿಂಗಪ್ಪ ದಂದರಗಿ, ಶಿವನಗೌಡ ಪಾಟೀಲ, ಸಿದ್ದು ಮಾದರ, ಹಾಸಿಂಪೀರ ಮುಜಾವರ, ಮಂಜುಳಾ ಮೇರಾಕರ ಮಾತನಾಡಿದರು.
ಮಹಾದೇವ ಬೋರ್ಜಿ, ಸಿದ್ದಪ್ಪ ಮೇಟಿ, ಅಜ್ಜು ಬಾಯಸರಕಾರ ಇತರರು ಇದ್ದರು.
ಪೋಟೊ: 28 ಬಿಎಲ್ ಜಿ 1
ಬೀಳಗಿ ಪೊಲೀಸ್ ಠಾಣೆ ಆವರಣದಲ್ಲಿನಡೆದ ಹೋಳಿ ಹಾಗೂ ರಂಜಾನ ಶಾಂತಿ ಸಭೆಯಲ್ಲಿಸಿಪಿಐ ಹಣಮಂತ ಸಣಮನಿ ಮಾತನಾಡಿದರು.

