ಮಾವಿನ ತೋಟಗಳಲ್ಲಿಹೂವಿನ ಹಬ್ಬ

Contributed byaravindahebbar1971@gmail.com|Vijaya Karnataka

ಈ ಬಾರಿ ಜಿಲ್ಲೆಯಾದ್ಯಂತ ಕಾಡು ಮಾವಿನ ಮರಗಳು ಹೇರಳವಾಗಿ ಹೂ ಬಿಟ್ಟಿವೆ. ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ಮರಗಳು ಹೂವಿನಿಂದ ಕಂಗೊಳಿಸುತ್ತಿವೆ. ಗ್ರಾಮೀಣ ಭಾಗ, ರಸ್ತೆ ಬದಿ, ಅರಣ್ಯ ಪ್ರದೇಶಗಳಲ್ಲಿಯೂ ಮರಗಳು ಹೂ ಬಿಟ್ಟಿವೆ. ನೈಸರ್ಗಿಕವಾಗಿ ಬೆಳೆಯುವ ಕಾಡು ಮಾವಿನ ರುಚಿ ವಿಶಿಷ್ಟವಾಗಿದ್ದು, ಉಪ್ಪಿನಕಾಯಿಗೆ ಹೆಚ್ಚು ಬಳಕೆಯಾಗುತ್ತದೆ. ಉತ್ತಮ ಚಳಿಯ ವಾತಾವರಣ ಪರಾಗಸ್ಪರ್ಶಕ್ಕೆ ಸಹಕಾರಿಯಾಗಿದೆ. ಮಳೆ ಬಂದರೆ ಹೂವು ಉದುರುವ ಸಾಧ್ಯತೆ ಇದೆ. ಕಾಡು ಪ್ರಾಣಿಗಳಿಗೂ ಇದು ಉತ್ತಮ ಆಹಾರವಾಗಲಿದೆ.

mango orchards bloom with natural wild mango variety

ಕಳೆದ ಬಾರಿಗಿಂತ ಹೆಚ್ಚು ಹೂವು ಬಿಟ್ಟ ಮರಗಳು| ಮಳೆ ಬಂದರೆ ಪಜೀತಿ

ಅರವಿಂದ ಹೆಬ್ಬಾರ್ ಮುಂಡಾಜೆ ಬೆಳ್ತಂಗಡಿ

್ಛಛಿಛಿdಚಿa್ಚkvkಞ್ಞಜಃಜಞaಜ್ಝಿ.್ಚಟಞ

ಈ ಬಾರಿ ಜಿಲ್ಲೆಯ ಹೆಚ್ಚಿನ ಕಡೆಗಳಲ್ಲಿಕಾಟು ಮಾವಿನ ಮರಗಳು ಹೂ ಬಿಟ್ಟು ಕಂಗೊಳಿಸುತ್ತಿವೆ.

ಗ್ರಾಮೀಣ ಭಾಗಗಳು, ರಸ್ತೆ ಬದಿ, ಹೆದ್ದಾರಿ ಬದಿ, ಅರಣ್ಯ ಪ್ರದೇಶದಲ್ಲಿರುವ ಹೆಚ್ಚಿನ ಮಾವಿನ ಮರಗಳು ಹೂವನ್ನು ಬಿಟ್ಟಿವೆ.

ಯಾವುದೇ ರಾಸಾಯನಿಕಗಳ ಸಹಕಾರವಿಲ್ಲದೆ ನೈಸರ್ಗಿಕವಾಗಿ ಬೆಳೆಯುವ ಕಾಟು ಮಾವು ವಿಶಿಷ್ಟ ರುಚಿ ಹೊಂದಿದ್ದು, ಇದರಲ್ಲಿಹಲವು ಪ್ರಭೇದಗಳಿವೆ. ಒಂದೊಂದು ಮಾವಿನ ಮರದ ಮಾವಿಗೂ ಒಂದೊಂದು ರುಚಿ ಇದೆ. ಗ್ರಾಮೀಣ ಭಾಗಗಳಲ್ಲಿ ಉಪ್ಪಿನಕಾಯಿ ತಯಾರಿಸಲು ಕಾಟು ಮಾವಿನ ಕಾಯಿಯನ್ನು ಅತಿ ಹೆಚ್ಚು ಬಳಸಲಾಗುತ್ತದೆ. ಇದರ ಉಪ್ಪಿನಕಾಯಿ ಭಾರಿ ರುಚಿಯನ್ನು ಹೊಂದಿದ್ದು, ವಿಶೇಷ ಬೇಡಿಕೆಯನ್ನು ಹೊಂದಿದೆ.

ಕಳೆದ ವರ್ಷ ಮಾವಿನ ಮರಗಳು ಸಾಮಾನ್ಯ ಪ್ರಮಾಣದಲ್ಲಿ ಹೂ ಬಿಟ್ಟಿದ್ದವು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅತಿ ಹೆಚ್ಚು ಕಡೆ ಮಾವಿನ ಮರಗಳು ಹೂ ಬಿಟ್ಟಿರುವುದು ಕಂಡು ಬರುತ್ತಿದೆ. ಮುಂದಿನ ಒಂದು ತಿಂಗಳಲ್ಲಿ ಗ್ರಾಮೀಣ ಭಾಗಗಳಲ್ಲಿಉಪ್ಪಿನಕಾಯಿ ತಯಾರಿಗೆ ಮಾವಿನ ಮರಗಳು ನಾಂದಿಯಾಗಿದೆ.

ಕಾಟು ಮಾವಿನ ಕಾಯಿಯಿಂದ ಮಿಡಿ ಉಪ್ಪಿನಕಾಯಿ ಒಂದಿಷ್ಟು ಬೆಳೆದರೆ ತುಂಡು ಉಪ್ಪಿನಕಾಯಿ ಸೇರಿದಂತೆ ಹಲವು ಬಗೆಯ ರುಚಿ ರುಚಿ ಉಪ್ಪಿನಕಾಯಿ ತಯಾರಿಸಲಾಗುತ್ತದೆ. ಮಾವಿನ ಮಿಡಿಯನ್ನು ಉಪ್ಪಿನಲ್ಲಿವ್ಯವಸ್ಥಿತವಾಗಿ ಹಾಕಿ ಇಟ್ಟರೆ ಕಾಟು ಮಾವಿನ ಕಾಯಿ ಅತಿ ಹೆಚ್ಚು ಕಾಲ ಕೆಡುವುದಿಲ್ಲ. ಸಮಯ ಕಳೆದಂತೆ ಈ ಮಿಡಿಯ ರುಚಿಯೂ ಹೆಚ್ಚುತ್ತದೆ. ಆದರೆ ಇದು ಕೆಲವು ಮರಗಳ ಮಿಡಿಗಳನ್ನು ಅವಲಂಬಿಸಿರುತ್ತದೆ ಎಂದು ಹೇಳಲಾಗುತ್ತದೆ.

ವಾತಾವರಣ ಅವಲಂಬಿತ

ಈ ಬಾರಿ ಮಾವಿನ ಮರಗಳು ಹೂ ಬಿಡಲು ಮಳೆಗಾಲದ ನಿರಂತರ ಮಳೆಯೂ ಕಾರಣ ಈ ಬಾರಿಯ ಡಿಸೆಂಬರ್ ತಿಂಗಳ ಚಳಿಯ ವಾತಾವರಣ ಪರಾಗಸ್ಪರ್ಶಕ್ಕೆ ಸಹಕಾರಿಯಾಯಿತು. ಉತ್ತಮ ಚಳಿಯ ಜತೆ ಇಬ್ಬನಿ ವಾತಾವರಣ ಹೂವು ಮಿಡಿಯಾಗಲು ಪೂರಕ.ಆದರೆ ಮಾವು ಹೂ ಬಿಡುತ್ತಿದ್ದಂತೆಯೇ ಮೋಡ ಕವಿದ ವಾತಾವರಣ ಅಲ್ಲಲ್ಲಿಮಳೆ ಉಂಟಾಗುತ್ತಿರುವುದರಿಂದ ಈ ರೀತಿಯ ವಾತಾವರಣ ಮುಂದುವರಿದರೆ ಹೂವು ಒಣಗಿ ಬೀಳುವುದೇ ಹೆಚ್ಚು. ಹೀಗಾದರೆ ಹೂ ಬಿಟ್ಟಿರುವ ಮಾವಿನ ಮರಗಳಲ್ಲಿಹೆಚ್ಚಿನ ಪ್ರಮಾಣದ ಫಲವೂ ಸಿಗದು.

ಕಾಡು ಪ್ರಾಣಿಗಳಿಗೂ ಪ್ರಿಯ

ತರಕಾರಿ ಎಳನೀರು ಸೇರಿದಂತೆ ಕೆಲವೊಂದು ಕೃಷಿ ಉತ್ಪನ್ನಗಳಿಗೆ ಮಂಗ, ಕೆಂಚಳಿಲುಗಳ ಕಾಟ ವಿಪರೀತವಾಗಿದೆ. ಈಗ ಹೂ ಬಿಟ್ಟ ಮರಗಳು ಹಣ್ಣಾಗುವ ತನಕ ಬೆಳೆದರೆ ಇದು ಕಾಡು ಪ್ರಾಣಿಗಳಿಗೂ ಹಲವು ಕಾಲಕ್ಕೆ ಉತ್ತಮ ಆಹಾರವಾಗಲಿದೆ. ಹಣ್ಣು ಬೆಳೆಯುವ ಹೊತ್ತಿಗೆ ಮಂಗಗಳ ಕಾಟವೂ ಕಡಿಮೆಯಾಗಲಿದೆ. ಸಾಮಾನ್ಯವಾಗಿ ಮಾವು ಹಲಸು ಒಟ್ಟೊಟ್ಟಿಗೆ ಬೆಳೆಯುವ ಕಾರಣ ಮಾರ್ಚ್ನಿಂದ ಜೂನ್ ತನಕ ಕಾಡುಗಳಲ್ಲಿಇದರ ಲಭ್ಯತೆ ಇರುತ್ತದೆ.

....

ಈ ವರ್ಷ ಭಾರಿ ಪ್ರಮಾಣದಲ್ಲಿ ಮಾವಿನ ಮರಗಳು ಹೂ ಬಿಟ್ಟಿವೆ.ಇದಕ್ಕೆ ಪೂರಕ ವಾತಾವರಣ ನಿರ್ಮಾಣವಾಗುವ ಅಗತ್ಯವಿದೆ.ಗ್ರಾಮೀಣ ಭಾಗದಲ್ಲಿಪ್ರತಿ ಮರವೂ ಹೂ ಬಿಟ್ಟಿರುವುದು ವಿಶೇಷವಾಗಿದೆ. ಕಾಟು ಮಾವು ಆರೋಗ್ಯಕ್ಕೂ ಪೂರಕವಾಗಿದೆ.

-ವಾಸುದೇವ ರಾವ್ , ಕೃಷಿಕ, ಮಿತ್ತಬಾಗಿಲು

.....

ಕಾಟು ಮಾವಿಗೆ ತನ್ನದೇ ಆದ ವಿಶೇಷತೆ ಇದೆ. ನೈಸರ್ಗಿಕವಾಗಿ ಬೆಳೆಯುವ ಇದರ ರುಚಿಯೇ ವಿಶಿಷ್ಟ. ಉಪ್ಪಿನಕಾಯಿಯಿಂದ ಹಿಡಿದು ಹಲವು ಖಾದ್ಯಗಳನ್ನು ಇದರಿಂದ ತಯಾರಿಸಬಹುದು. ಸದ್ಯ ಮಾವಿನ ಮರಗಳು ಹೂಗಳಿಂದ ಕಂಗೊಳಿಸುತ್ತಿವೆ.

-ಉಷಾ ಫಡಕೆ, ಗೃಹಿಣಿ, ಮುಂಡಾಜೆ.

14ಎಂಜೆ ಕಾಟು ಮಾವು

1,2,3 ಹೂ ಬಿಟ್ಟಿರುವ ಕಾಟು ಮಾವಿನ ಮರ.

+ವಾಸುದೇವ ರಾವ್ ,

+ಉ?ಾ ಫಡಕೆ.