ವಿಕ ಸುದ್ದಿಧಿಲೋಕ ಬೆಂಗಧಿಳೂಧಿರು ಯುಗಾದಿ ಮತ್ತು ರಂಜಾನ್ ಹಬ್ಬಗಳು ಒಟ್ಟಾಗಿ ಬಂದಿರುವುದರಿಂದ ಮಾರುಕಟ್ಟೆ ಗಳಲ್ಲಿಖರೀದಿ ಸಂಭ್ರಮ ಜೋರಾಗಿದೆ. ಗುರುವಾರ ಯುಗಾದಿ, ಶನಿವಾರ ರಂಜಾನ್ ಹಬ್ಬ ಆಚರಿಸಲಾಗುತ್ತಿದೆ. ಯುಗಾದಿ ಹಬ್ಬಕ್ಕೆ ಮಾವು-ಬೇವು, ಹೂವುಗಳು ಮಾರುಕಟ್ಟೆಗೆ ಬಂದಿದ್ದು, ಭರದ ಖರೀದಿ ನಡೆಯಿತು. ಹಬ್ಬದ ಹಿನ್ನೆಲೆಯಲ್ಲಿಬಟ್ಟೆ ಖರೀದಿಗಾಗಿ ಚಿಕ್ಕಪೇಟೆ ಸುತ್ತಲಿನ ಬಟ್ಟೆ ಅಂಗಡಿಗಳಲ್ಲಿಹೆಚ್ಚಿನ ಜನ ನೆರೆದಿದ್ದರು. ಕೆ.ಆರ್ . ಮಾರುಕಟ್ಟೆ ಸೇರಿದಂತೆ ಪ್ರಮುಖ ಮಾರುಕಟ್ಟೆಗಳಲ್ಲಿಪೂಜಾ ಸಾಮಗ್ರಿ, ಹೋಳಿಗೆ ಸಾಮಗ್ರಿಗಳು, ಹೂವು-ಹಣ್ಣು, ತರಕಾರಿ ಖರೀದಿಯೂ ಜೋರಾಗಿ ನಡೆಯಿತು. ಹೂವು, ಹಣ್ಣು, ತರಕಾರಿ ಸೇರಿದಂತೆ ಹಲವು ವಸ್ತುಗಳ ಬೆಲೆ ಗ್ರಾಹಕರ ಕೈಗೆಟಕುವಂತಿರುವುದು ಗ್ರಾಹಕರ ಸಂತಸ ಹೆಚ್ಚಿಸಿದೆ. ಕೆ.ಆರ್ . ಮಾರುಕಟ್ಟೆಯಲ್ಲಿಸಗಟು ದರದಲ್ಲಿಕನಧಿಕಾಂಬರ ಹೂವು ಸಾಮಾನ್ಯವಾಗಿ 900 ರೂ. ಹಾಗೂ ಮೇಲ್ಪಟ್ಟಿರುತ್ತದೆ. ಮಲ್ಲಿಗೆ ಹೂವು 600-700 ರೂ. ಇರುತ್ತಿತ್ತು. ಈಗ ಕ್ರಮವಾಗಿ 800 ಹಾಗೂ 400 ರೂ.ಇದೆ. ಮಾರುಧಿಕಧಿಟ್ಟೆಗೆ ಬೆಂಗಧಿಳೂರು ಗ್ರಾಮಾಂತರ, ಆನೇಕಲ್ , ತುಮಧಿಕೂರು, ಚಿಕ್ಕಧಿಬಧಿಳ್ಳಾಧಿಪುರ ಮತ್ತಿಧಿತರ ಭಾಗಧಿಗಧಿಳಿಂದ ಸಾಕಷ್ಟು ಪ್ರಮಾಧಿಣಧಿದಲ್ಲಿಹೂವು ಆಗಧಿಮಿಧಿಸುಧಿತ್ತಿದೆ. ಜತೆಗೆ ತಮಿಧಿಳುಧಿನಾಧಿಡಿಧಿನಿಂದಲೂ ಬರುಧಿತ್ತಿದೆ ಎನ್ನುತ್ತಾರೆ ಸಗಟು ಹೂವಿನ ವ್ಯಾಪಾರಿ ವಿಜಯಕುಮಾರ್ . ಟೊಮೇಟೊ, ನುಗ್ಗೆಕಾಯಿ, ಈರುಳ್ಳಿ, ಕ್ಯಾರೆಟ್ ಹೀಗೆ ಬಹುತೇಕ ತರಕಾರಿಗಳ ಬೆಲೆ ಇಳಿಕೆಯಾಗಿದೆ. ಏಲಕ್ಕಿ ಬಾಳೆ ಕೆಲವೆಡೆ 70-80 ರೂ.ವರೆಗೆ ಮಾರಾಟವಾಗುತ್ತಿದೆ. ವರ್ಷಧಿ ತೊಧಿಡಧಿಕಿನ ಸಾಮಧಿಗ್ರಿಧಿಗಳ ಖರೀಧಿದಿ: ಯುಗಾದಿ (ಗುರುವಾರ)ಯ ಮರುದಿನ ಅಂದರೆ ಶುಕ್ರವಾರ ವರ್ಷ ತೊಡಕು ಆಚರಿಸಲು ಜನ ಕಾಯುತ್ತಿದ್ದಾರೆ. ವರ್ಷ ತೊಡಕು ಹಾಗೂ ರಂಜಾನ್ ನಲ್ಲಿಮಾಡುವ ಮಾಂಸಾಹಾರದ ಅಡುಗೆಗೆ ಹಲವರು ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಮತ್ತಿತರ ಪದಾರ್ಥಗಳನ್ನು ಖರೀದಿಸಿದರು.

