ಪದವಿಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾಉಪ ನಿರ್ದೇಶಕರ ಕಚೇರಿಗಳ ಆಡಳಿತಾತ್ಮಕ ನಿಯಂತ್ರಣವನ್ನು ಜಿಲ್ಲಾಪಂಚಾಯಿತಿ ಸಿಇಒಗಳ ಅಧೀನಕ್ಕೆ ವರ್ಗಾಯಿಸುವ ಯಾವುದೇ ಪ್ರಸ್ತಾವ ಇಲ್ಲಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದರು. ವಿಧಾನ ಪರಿಷತ್ ನಲ್ಲಿಮಂಗಳವಾರ ಶೂನ್ಯವೇಳೆಧಿಯಲ್ಲಿ‘ವಿಜಯ ಕರ್ನಾಟಕ’ ದ ‘ಪಿಯು ಮೌಲ್ಯಮಾಪನ ಬಹಿಷ್ಕರಿಸಲು ನಿರ್ಧಾರ’ ಎಂಬ ಸುದ್ದಿಯನ್ನು ಪ್ರಸ್ತಾಪಿಸಿದ ಕಾಂಗ್ರೆಸ್ ನ ಪುಟ್ಟಣ್ಣ ಮತ್ತು ಜೆಡಿಎಸ್ ಎಸ್ .ಎಲ್ . ಬೋಜೇಗೌಡ, ‘‘ಯಾವುದೇ ಕಾರಣಕ್ಕೂ ಪದವಿಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾಉಪ ನಿರ್ದೇಶಕರ ಕಚೇರಿಗಳ ಆಡಳಿತಾತ್ಮಕ ನಿಯಂತ್ರಣವನ್ನು ಜಿ.ಪಂ ಸಿಇಒಗಳ ಅಧೀನಕ್ಕೆ ವರ್ಗಾಯಿಸಬಾರದು. ಮೌಲ್ಯಮಾಪಕರ ಬಾಕಿ ಭತ್ಯೆಯನ್ನು ಕೂಡಲೇ ಬಿಡುಗಡೆ ಮಾಡಬೇಕು,’’ ಎಂದು ಆಗ್ರಹಿಸಿದರು. ಇದಕ್ಕೆ ಸಚಿವರು, ‘‘ಸದ್ಯಕ್ಕೆ ಆ ರೀತಿಯ ಯಾವುದೇ ಪ್ರಸ್ತಾವನೆ ಇಲ್ಲ. ಮೌಲ್ಯಮಾಪಕರ ಗೌರವಧನ ಬಾಕಿ ಬಿಡುಗಡೆಗೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ. ಮಾ.20 ರೊಳಗೆ ಬಾಕಿ ಭತ್ಯೆ ಪಾವತಿಯಾಗಲಿದೆ,’’ ಎಂದು ಹೇಳಿದರು.

