ಸಿಡಿದೆದ್ದ ಹೆಣ್ಣುಮಕ್ಕಳ ಕಥೆ ಮೃತ್ಯು ದೇವತೆ
ಹೆಣ್ಣು ಮಕ್ಕಳ ನೋವು, ಆವೇಶದ ಕಥೆ ‘ಮೃತ್ಯು ದೇವತೆ’. ನವೀನ್ ಮಹದೇವ ಮೊದಲ ಬಾರಿಗೆ ಕಥೆ-ಚಿತ್ರಕಥೆ ಬರೆದು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈಗಾಗಲೇ ಚಿತ್ರದ ‘ಕಾಳಿ’ ಮತ್ತು ‘ಮಹದೇವ’ ಹಾಡುಗಳು ಬಿಡುಗಡೆಯಾಗಿ ಗಮನ ಸೆಳೆದಿವೆ.
ಮಹಿಳಾ ಪ್ರಧಾನ ಚಿತ್ರ
ಸಮಾಜದ ಕಿರುಕುಳ ಅತಿರೇಕಕ್ಕೆ ಹೋದಾಗ, ಒಬ್ಬ ಮುಗ್ಧ ಹುಡುಗಿ ಹೇಗೆ ಮೃತ್ಯುದೇವತೆ ಅಥವಾ ಚಂಡಿ-ಚಾಮುಂಡಿ ಅವತಾರ ತಾಳುತ್ತಾಳೆ ಎಂಬುದೇ ಈ ಚಿತ್ರದ ಸಾರಾಂಶ. ‘ಹೆಣ್ಣುಮಕ್ಕಳು ಎಷ್ಟೇ ಬುದ್ಧಿವಂತರಾದರೂ, ಸುಶಿಕ್ಷಿತರಾದರೂ ಕೆಲವೊಮ್ಮೆ ಅರಿವಿಲ್ಲದೆಯೇ ಸಂಚಿನ ಬಲೆಗೆ ಬೀಳುತ್ತಾರೆ. ಅಂತಹ ಸನ್ನಿವೇಶಗಳನ್ನು ಈ ಚಿತ್ರದಲ್ಲಿಹೇಳುವ ಪ್ರಯತ್ನ ಮಾಡಿದ್ದೇನೆ’ಎಂದಿದ್ದಾರೆ ನವೀನ್ .
ಚಿತ್ರದ ನಾಯಕಿ ಸಾರಿಕಾ, ‘ಈ ಚಿತ್ರದಲ್ಲಿನನ್ನದು ಆರತಿ ಎಂಬ ಪಾತ್ರ. ಆಕೆ ಮುಗ್ಧ ಹುಡುಗಿ. ಅವಳನ್ನು ಕೆಣಕಿದಾಗ ಏನಾಗುತ್ತದೆ ಎಂದು ತೋರಿಸುವ ಪಾತ್ರ ನನ್ನದು. ಈ ಚಿತ್ರದಲ್ಲಿಮೊದಲ ಬಾರಿಗೆ ಫೈಟಿಂಗ್ ಮಾಡಿದ್ದೇನೆ. ಹಲವು ದಿನಗಳ ಕಾಲ ರಾತ್ರಿ ಕಾಡಿನಲ್ಲಿಚಿತ್ರೀಕರಣ ಮಾಡಿದ್ದೇವೆ’ ಎಂದಿದ್ದಾರೆ.
ಹಿರಿಯ ನಟಿ ವಿನಯಾ ಪ್ರಸಾದ್ , ‘ಗುಡ್ಡ-ಬೆಟ್ಟ, ಹಿಮ ಹೀಗೆ ಚೆಂದದ ವಾತಾವರಣದಲ್ಲಿಚಿತ್ರೀಕರಣ ಮಾಡಿದ್ದೇವೆ. ಈ ಚಿತ್ರದಲ್ಲಿಉತ್ತಮ ಸಂದೇಶ ಇದೆ’ ಎಂದು ಹೇಳಿದ್ದಾರೆ.
ಚಿತ್ರದಲ್ಲಿಹಿಮಶ್ರೀ, ಡಯಾನಾ, ಮಾಹಿನ್ ಕುಬೇರ, ಸೂರ್ಯ, ಪವನ್ , ವರ್ಷಿತಾ ಮುಂತಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ಅನಿರು¨್ಧ… ಛಾಯಾಗ್ರಹಣ, ಶಿವಪ್ರಸಾದ್ ಸಂಗೀತವಿದ್ದು, ರಘು ನೃತ್ಯ ನಿರ್ದೇಶನ, ಅಲ್ಟಿಮೇಟ್ ಶಿವು ಹಾಗೂ ಚಿಟ್ಟ ಜಾಧವ್ ಅವರ ಸಾಹಸ ನಿರ್ದೇಶನ ಮತ್ತು ವಿಕ್ರಮಾದಿತ್ಯ ಸಂಕಲನವಿದೆ.

