‘ಗುರಿ ಇಟ್ಟುಕೊಂಡು ಓದಿ’

Contributed byraja.bandihal@gmail.com|Vijaya Karnataka
in the name of achievement student sumitra jali emphasizes study with a goal
‘ಗುರಿ ಇಟ್ಟುಕೊಂಡು ಓದಿ’

ವಿಕ ಸುದ್ದಿಲೋಕ ಹನುಮಸಾಗರ
‘‘ಸಾಧನೆಗೆ ಬಡತನ ಅಡ್ಡಿಯಲ್ಲಎನ್ನುವದನ್ನು ವಿದ್ಯಾರ್ಥಿನಿ ತೋರಿಸಿಕೊಟ್ಟಿದ್ದಾಳೆ,’’ ಎಂದು ಮುಖ್ಯಶಿಕ್ಷಕಿ ಭಾರತಿ ದೇಸಾಯಿ ಹೇಳಿದರು.

ಎಂಬಿಬಿಎಸ್ ಗೆ ಆಯ್ಕೆಯಾದ ಕಸ್ತೂರಬಾ ಗಾಂಧಿ ವಸತಿ ಶಾಲೆಯ ವಿದ್ಯಾರ್ಥಿನಿ ಸುಮಿತ್ರಾ ಜಾಲಿ ಅವರನ್ನು ಸನ್ಮಾನಿಸಿ ಮಾತನಾಡಿದರು. ಶಾಲೆಯಲ್ಲಿಅನಾಥರು, ಶಾಲೆ ಬಿಟ್ಟ ಮಕ್ಕಳು, ಒಂಟಿ ಪಾಲಕರು, ಕಡು ಬಡತನ ಹಾಗೂ ಆರ್ಥಿಕ ಪರಿಸ್ಥಿತಿಯಿಂದ ಹಿಂದುಳಿದ ಬಾಲಕಿಯರು ವ್ಯಾಸಂಗ ಮಾಡುತ್ತಾರೆ. ವಿದ್ಯಾರ್ಥಿನಿ ಸಾಧನೆಯಿಂದ ಶಾಲೆಗೆ ಕೀರ್ತಿ ಬಂದಿದೆ ಎಂದರು.

ವಿದ್ಯಾರ್ಥಿನಿ ಸುಮಿತ್ರಾ ಜಾಲಿ ಮಾತನಾಡಿ, ಜೀವನದಲ್ಲಿಗುರಿ ಇಟ್ಟುಕೊಂಡು ಓದಬೇಕು ಎಂದಳು.

ನಿಲಯ ಮೇಲ್ವಿಚಾರಿಕಿ ರುಬಿಯಾ ಬೇಗಂ, ಶಿಕ್ಷಕಿಯರಾದ ಸಾವಿತ್ರಿ ನಿಟ್ಟಾಲಿ, ಶಕುಂತಲಾ ಚಿನಿಲವಾರ, ಜಹೀರಾ ಬಾನು, ಹನುಮಂತಿ ಹೂಲಸಗೇರಿ, ಅಡುಗೆದಾರರಾದ ಲಕ್ಷಿತ್ರ್ಮ ಗುರಿಕಾರ,

ಯಲ್ಲಮ್ಮ ಕುರಿ, ಸವಿತಾ, ಶ್ರೀದೇವಿ, ಅಡಿವಯ್ಯ ಇದ್ದರು.

ಕೆಪಿಎಲ್ 21ಎಚ್ ಎಸ್ ಆರ್ ಫೋಟೊ1:ಹನುಮಸಾಗರದ ಕಸ್ತೂರಬಾ ಗಾಂಧಿ ವಸತಿ ಶಾಲೆಯಲ್ಲಿಸಾಧಕ ವಿದ್ಯಾರ್ಥಿನಿಯನ್ನು ಸನ್ಮಾನಿಸಲಾಯಿತು.