ಪಡುಬಿದ್ರಿ: ದ.ಕ. ಮೊಗವೀರ ಮಹಾಜನ ಸಂಘದ ಆಡಳಿತದ ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷಿತ್ರ್ಮೕ ದೇವಸ್ಥಾನದಲ್ಲಿವರ್ಷಂ ಪ್ರತಿಯಂತೆ ನಡೆಸಿಕೊಂಡು ಬಂದಿರುವ ಸಾಮೂಹಿಕ ಶ್ರೀವರಮಹಾಲಕ್ಷಿತ್ರ್ಮೕ ವೃತ ಪೂಜೆ ಅ.21ರಂದು ನಡೆಯಲಿದೆ.
ಬೆಳಗ್ಗೆ 9.30 ಗಂಟೆಯಿಂದ ಕಲಶ ಪ್ರತಿಷ್ಠೆ ನಡೆಯಲಿದ್ದು, ಬಳಿಕ ಸಾಮೂಹಿಕ ವರಮಹಾಲಕ್ಷಿತ್ರ್ಮೕ ಪೂಜಾ ಕಾರ್ಯಕ್ರಮ ಮುಂದುವರಿಯಲಿದೆ. ಮಧ್ಯಾಹ್ನ 12 ಗಂಟೆಗೆ ಶ್ರೀ ಸನ್ನಿಧಿಯಲ್ಲಿಮಹಾಪೂಜೆ ನಡೆಯಲಿದ್ದು, ಮುಂದುವರಿದು ಮಹಾ ಅನ್ನಸಂತರ್ಪಣೆ ನಡೆಯಲಿದೆ ಎಂದು ಶ್ರೀ ಕ್ಷೇತ್ರದ ಪರವಾಗಿ ದಕ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಪ್ರಕಟಣೆಯಲ್ಲಿತಿಳಿಸಿದ್ದಾರೆ.