ಮೈಸೂರು: ಶೇಷಾದ್ರಿಪುರಂ

Contributed bynagaraj.navimane@timesgroup.com|Vijaya Karnataka
empowering youth through thought mysore sheshadripuram conference
ಬಸವ, ಗಾಂಧಿ, ಸ್ವಾಮಿ ವಿವೇಕಾನಂದ, ಅಂಬೇಡ್ಕರ್

ಮಾರ್ಗ ಬೇರೆ, ಗುರಿ ಒಂದೇ: ಪ್ರೊ.ಮಲ್ಲೇಪುರಂ
ಶೇಷಾದ್ರಿಪುರಂ ಪದವಿ ಕಾಲೇಜಿನಲ್ಲಿಸಮಕಾಲೀನ ಚಿಂತನೆಗಳು ಕುರಿತು ರಾಷ್ಟಿ್ರೕಯ ವಿಚಾರ ಸಂಕಿರಣ

ವಿಕ ಸುದ್ದಿಲೋಕ ಮೈಸೂರು

ಬಸವ, ಗಾಂಧಿ, ವಿವೇಕಾನಂದ ಹಾಗೂ ಅಂಬೇಡ್ಕರ್ ಅವರ ಮಾರ್ಗ ಬೇರೆ ಬೇರೆಯಾದರೂ ಗುರಿ ಒಂದೇ. ಸಮನ್ವಯ ದೃಷ್ಟಿಯಿಂದ ಇವರ ಚಿಂತನೆಗಳನ್ನು ಯುವಜನಾಂಗ ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಕರ್ನಾಟಕ ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಹೇಳಿದರು.

ನಗರದ ಹೆಬ್ಬಾಳಿನಲ್ಲಿರುವ ಶೇಷಾದ್ರಿಪುರಂ ಪದವಿ ಕಾಲೇಜು ಸಭಾಂಗಣದಲ್ಲಿಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿಸೋಮವಾರ ಏರ್ಪಡಿಸಿದ್ದ ‘ಬಸವ, ಗಾಂಧಿ, ಸ್ವಾಮಿ ವಿವೇಕಾನಂದ, ಅಂಬೇಡ್ಕರ್ ಸಮಕಾಲೀನ ಚಿಂತನೆಗಳು’ ಕುರಿತು ರಾಷ್ಟಿ್ರೕಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘‘ಈ ನಾಲ್ವರು ಮಹನೀಯರದು ಪರಸ್ಪರ ಪೂರಕವಾದ, ಬದುಕಿಗೆ ಆದರ್ಶವಾದ ಚಿಂತನೆಗಳು. ಇವರ ಹಾದಿಯಲ್ಲಿನಾವು ನಡೆದು ತೋರಿಸಬೇಕು,’’ ಎಂದರು.

‘‘ಬಸವಣ್ಣನವರದು ಅಂತರಂಗ, ಬಹಿರಂಗ ಶುದ್ಧಿ ಮಾರ್ಗ, ಗಾಂಧಿಯದು ಅಹಿಂಸಾ ಮಾರ್ಗ, ವಿವೇಕಾನಂದರದು ಸ್ವಾಭಿಮಾನಿ ಮಾರ್ಗ, ಅಂಬೇಡ್ಕರ್ ಅವರದು ಸಂವಿಧಾನ ಮಾರ್ಗ. ಈ ನಾಲ್ವರು ಕೇವಲ ಭಾರತಕ್ಕೆ ಮಾತ್ರವಲ್ಲದೇ ಇಡೀ ವಿಶ್ವಕ್ಕೆ ಕೊಡುಗೆ ನೀಡಿದ್ದಾರೆ. ಹೀಗಾಗಿ ಇವರೆಲ್ಲಾ ವಿಶ್ವಮಾನ್ಯರು, ಜಗಮಾನ್ಯರು,’’ ಎಂದು ಅವರು ಬಣ್ಣಿಸಿದರು. ‘‘ರಾಷ್ಟ್ರಕವಿ ಕುವೆಂಪು ಅವರ ಸರ್ವಜನಾಂಗದ ಶಾಂತಿಯ ತೋಟ ಎಂಬಂತೆ ಅಂಬೇಡ್ಕರ್ ಅವರ ಸಂವಿಧಾನ ಇದೆ. ಪಠ್ಯದಲ್ಲಿಇರುವುದನ್ನು ಕಲಿಯುವುದು ಉಪಜೀವನ. ಆದರೆ ಲೋಕವನ್ನು ಸಮಷ್ಟಿ ದೃಷ್ಟಿಯಿಂದ ನೋಡಬೇಕು,’’ ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾಲೇಜಿನ ಗೌರವ ಕಾರ್ಯದರ್ಶಿ ಡಾ. ವೂಡೇ ಪಿ. ಕೃಷ್ಣ ಮಾತನಾಡಿ, ‘‘ಪ್ರಸ್ತುತ ಸಮಾಜದಲ್ಲಿಚಿಂತನಾ ನಾಯಕತ್ವ ಬೇಕು. ಒಳ್ಳೆಯ ಚಿಂತನೆಗಳು ಆರೋಗ್ಯಕರ ಸಮಾಜಕ್ಕೆ ಪೂರಕ. ವಿವಿಧ ಜಾತಿಗಳಿಂದ ಹರಿದು ಹಂಚಿಹೋಗಿರುವ ನಮ್ಮ ದೇಶದಲ್ಲಿಸಾಮಾಜಿಕ ಸಮಾನತೆ ಬೇಕಾಗಿದೆ. ಜಾತಿ, ಧರ್ಮವನ್ನು ಮನೆಯ ಒಳಗಿಟ್ಟು, ಹೊರಗೆ ನಾವೆಲ್ಲರೂ ಭಾರತೀಯರು ಎಂಬಂತೆ ವರ್ತಿಸಬೇಕು. ಪ್ರತಿಯೊಬ್ಬರೂ ಗಾಂಧಿ ಕಲ್ಪನೆಯ ಸ್ವಾತಂತ್ರ್ಯದ ಸಾಕಾರಕ್ಕಾಗಿ ದುಡಿಯಬೇಕು,’’ ಎಂದು ತಿಳಿಸಿದರು.

ಸಾಹಿತಿ ಪ್ರೊ.ಎಸ್ . ಶಿವರಾಜಪ್ಪ ದಿಕ್ಸೂಚಿ ಭಾಷಣ ಮಾಡಿ, ‘‘ಬಸವ, ಗಾಂಧಿ, ವಿವೇಕಾನಂದ ಹಾಗೂ ಅಂಬೇಡ್ಕರ್ ಅವರ ಚಿಂತನೆಗಳು ಸಾರ್ವಕಾಲಿಕವಾದವು. ಅನ್ಯ ಮಾರ್ಗಕ್ಕೆ ಹೋಗುತ್ತಿಕುವ ಯುವಜನಾಂಗಕ್ಕೆ ಈ ಚಿಂತನೆಗಳು ಅಗತ್ಯವಾಗಿವೆ,’’ ಎಂದು ಪ್ರತಿಪಾದಿಸಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ ಮಾತನಾಡಿದರು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ , ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಂ. ಚಂದ್ರಶೇಖರ್ , ಮೈಸೂರು ತಾ. ಅಧ್ಯಕ್ಷ ದೇವರಾಜು ಪಿ. ಚಿಕ್ಕಹಳ್ಳಿ ಮುಖ್ಯ ಅತಿಥಿಗಳಾಗಿದ್ದರು. ಕಾಲೇಜಿನ ಪ್ರಾಂಶುಪಾಲೆ ಡಾ.ಕೆ. ಸೌಮ್ಯಾ ಈರಪ್ಪ ಸ್ವಾಗತಿಸಿದರು.

ನಂತರ ವಿಚಾರಗೋಷ್ಠಿಯಲ್ಲಿಪ್ರೊ.ಕೆ. ಅನಂತರಾಮು, ಪ್ರೊ.ನೀಲಗಿರಿ ಎಂ. ತಳವಾರ, ಪ್ರೊ.ಸಾಸಲು ಜೆ. ವಿಶ್ವನಾಥ್ , ಪ್ರೊ.ವಿ.ಎನ…. ಶೇಷಗಿರಿ ರಾವ್ , ಡಾ.ಉಮೇಶ್ ಮೊದಲಾದವರು ಭಾಗವಹಿಸಿದ್ದರು.

(ಫೋಟೋ ಇದೆ)