ನಗರದ ಭೀಷ್ಮ ಕೆರೆಯಲ್ಲಿಚರಂಡಿ ಕೊಳೆ ನೀರು ಹಾಗೂ ಹಂದಿ-ನಾಯಿಗಳ ತ್ಯಾಜ್ಯ ಸೇರಿ ನೀರು ಕಲುಷಿತಗೊಂಡಿರುವುದರಿಂದ ಗಣೇಶ ಮೂರ್ತಿಗಳ ವಿಸರ್ಜನೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಸುದರ್ಶನ ಚಕ್ರ ಯುವ ಮಂಡಳ ಗದಗ-ಬೆಟಗೇರಿ ನಗರಸಭೆಗೆ ಮನವಿ ಮಾಡಿತು.
ಈ ಕುರಿತು ಸೋಮವಾರ ನಗರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಮಂಡಳದ ಅಧ್ಯಕ್ಷ ರಾಘವೇಂದ್ರ ಹಬೀಬ, ಗದಗ ನಗರದಲ್ಲಿಹಲವು ವರ್ಷಗಳಿಂದ ಭೀಷ್ಮ ಕೆರೆಯಲ್ಲಿಗಣೇಶ ಮೂರ್ತಿಗಳ ವಿಸರ್ಜನೆ ಮಾಡುವ ಪದ್ಧತಿ ನಡೆದುಕೊಂಡು ಬಂದಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿನಗರದ ಚರಂಡಿ ನೀರು ಹಾಗೂ ಹಂದಿಗಳ ತ್ಯಾಜ್ಯ ನೇರವಾಗಿ ಕೆರೆಗೆ ಸೇರುತ್ತಿರುವುದರಿಂದ ಕೆರೆಯ ಪಾವಿತ್ರ್ಯತೆ ಹಾಳಾಗಿದೆ ಎಂದು ಗಮನ ಸೆಳೆದರು.
ಭಕ್ತರು 5, 9, 11 ಹಾಗೂ 21 ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ಗಣೇಶ ಮೂರ್ತಿಗಳನ್ನು ಪೂಜಿಸಿ, ಅಂತಿಮವಾಗಿ ಕೊಳಕು ಹಾಗೂ ದುರ್ವಾಸನೆಯ ನೀರಿನಲ್ಲಿವಿಸರ್ಜಿಸುವುದು ಭಕ್ತರ ಭಾವನೆಗಳಿಗೆ ನೋವುಂಟು ಮಾಡುತ್ತಿದೆ. ಹೀಗಾಗಿ ಗಣೇಶ ಹಬ್ಬಕ್ಕೂ ಮುನ್ನ ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಭೀಷ್ಮ ಕೆರೆಯ ಪಕ್ಕದಲ್ಲಿಯೇ ತಾತ್ಕಾಲಿಕವಾಗಿ 60*100 ಅಡಿ ಅಳತೆಯ ಕೃತಕ ಹೊಂಡ ನಿರ್ಮಿಸಿ, ಅದರಲ್ಲಿಶುದ್ಧ ನೀರು ತುಂಬಿಸುವ ವ್ಯವಸ್ಥೆ ಮಾಡಬೇಕು. ಇದರಿಂದ ಭಕ್ತರು ಯಾವುದೇ ಅಳುಕಿಲ್ಲದೆ ಶ್ರದ್ಧಾಭಕ್ತಿಯಿಂದ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಲು ಅನುಕೂಲವಾಗಲಿದೆ. ಗಣೇಶ ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿಕೂಡಲೇ ಹೊಂಡ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿರಾಘವೇಂದ್ರ ಹಬೀಬ, ಮಾರುತಿ ದಹಿಂಡೆ, ವಿಜಯ ಬನಹಟ್ಟಿ, ರಾಜು ನಾಯ್ಕರ್ , ವಿಜಯ ಸೋಳಂಕಿ, ರತ್ನಾ ಕುರುಗೋಡ, ಆಕಾಶ ಗುಜ್ಜರ, ಸಾಗರ ಮಡಿವಾಳರ ಸೇರಿದಂತೆ ಮಂಡಳದ ಸದಸ್ಯರು ಉಪಸ್ಥಿತರಿದ್ದರು.
ಫೋಟೊ: 24 ಜಿಡಿಜಿ 3:
ಭೀಷ್ಮ ಕೆರೆಯಲ್ಲಿಗಣೇಶ ವಿಸರ್ಜನೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಿಸುವಂತೆ ನಗರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.