151 ಕೆಜಿ ಪಂಚಲೋಹದ ಘಂಟೆ ಸಮರ್ಪಣೆ
ಬಾಗಲಕೋಟೆ: ಶ್ರೀಶೈಲದಲ್ಲಿಕೈಲಾಸ ಬಾಗಿಲಿಗೆ ಅಳವಡಿಸಲು ಅಖಿಲ ಕರ್ನಾಟಕ ಮರಗಾಲ ಮಲ್ಲಯ್ಯಗಳ ಸಂಘ ಹಾಗೂ ಬೆಂಗಳೂರಿನ ಅಮ್ಮ ಫೌಂಡೇಶನ್ ವತಿಯಿಂದ ನಿರ್ಮಿಸಿರುವ 151 ಕೆ.ಜಿ. ಲೋಹದ ಘಂಟೆ ಸಮರ್ಪಣೆ ಕಾರ್ಯ ಮಾ.14 ರಂದು ನಡೆಯಲಿದೆ ಎಂದು ಸಂಘದ ಪ್ರಮುಖ ಲಕ್ಷ್ಮಣ ಇಂಗುನವರ ತಿಳಿಸಿದ್ದಾರೆ.ಬಾಗಲಕೋಟೆ, ವಿಜಯಪುರ, ಕಲಬುರಗಿ, ಯಾದಗಿರಿ, ಬೆಳಗಾವಿ, ರಾಯಚೂರು ಸೇರಿದಂತೆ ಉತ್ತರ ಕರ್ನಾಟಕದ ಹತ್ತಾರು ಜಿಲ್ಲೆಗಳ 150ಕ್ಕೂ ಹೆಚ್ಚು ಮರಗಾಲು ಮಲ್ಲಯ್ಯರು ಸ್ವಯಂ ಪ್ರೇರಣೆಯಿಂದ ಈ ಘಂಟೆ ನಿರ್ಮಿಸಿದ್ದಾರೆ. ಮಾ.1 ರಂದು ಚಿಕ್ಕೋಡಿ ತಾಲೂಕಿನ ಯಡೂರು ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಲ್ಲಿಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು ಘಂಟೆ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಈ ಘಂಟೆಯನ್ನು ಶ್ರೀಶೈಲ ಭಕ್ತರ ಪಾದಯಾತ್ರೆಯೊಂದಿಗೆ ಶ್ರೀಶೈಲಕ್ಕೆ ಸಾಗಿಸಲಾಗುತ್ತದೆ. ಮಾ.13 ರಂದು ಸುಕ್ಷೇತ್ರ ತಲುಪಲಿದೆ. ಹನಗಂಡಿಯ ಅಣ್ಣಪ್ಪ ಲಾಳಕಿ ಘಂಟೆ ತಯಾರಿಸಿದ್ದಾರೆ. ಒಂದು ಸಾರಿ ಬಾರಿಸಿದರೆ ಹೊರಹೊಮ್ಮುವ ಓಂಕಾರ ನಾದ ಕೈಲಾಸ ಬಾಗಿಲಿನ ಸುತ್ತ ನಾಲ್ಕು ಕಿ.ಮೀ. ವರೆಗೆ ಕೇಳುತ್ತದೆ ಎಂದು ಅವರು ಪ್ರಕಟಣೆಯಲ್ಲಿತಿಳಿಸಿದ್ದಾರೆ.
ಬೆಲ್ -ಬಿಜಿಕೆ-23
151 ಕೆ.ಜಿ. ಪಂಚಲೋಹದ ಘಂಟೆ

