ಅನುದಾನ ಶಿರಸಿ ಕ್ಷೇತ್ರಕ್ಕೆ 7.35ಕೋಟಿ ರೂ.,ಅ®

Contributed bykeregaddemurthy@gmail.com|Vijaya Karnataka

ಶಿರಸಿ ಮತ್ತು ಸಿದ್ದಾಪುರ ತಾಲೂಕಿನ ರಸ್ತೆ ಹಾಗೂ ಸೇತುವೆಗಳ ಅಭಿವೃದ್ಧಿಗೆ 7.35 ಕೋಟಿ ರೂ. ಅನುದಾನ ಮಂಜೂರಾಗಿದೆ. ಖಾನಾಪುರ-ತಾಳಗುಪ್ಪ ರಸ್ತೆಯ ಚತುಷ್ಪಥ ಕಾಮಗಾರಿಗೆ 1.85 ಕೋಟಿ ರೂ. ಹಾಗೂ ಶಿಥಿಲಗೊಂಡ ಸೇತುವೆಗಳ ಮರುನಿರ್ಮಾಣಕ್ಕೆ 5.50 ಕೋಟಿ ರೂ. ಮೀಸಲಿಡಲಾಗಿದೆ. ದೇವನಳ್ಳಿ-ಮಣದೂರು, ಧೋಣಿಗಾರ-ಕರೂರು, ಸೋಮನಹಳ್ಳಿ ಕೂಡು ರಸ್ತೆಗಳಲ್ಲಿ ಸೇತುವೆ ನಿರ್ಮಾಣ ಹಾಗೂ ಪುನರ್‌ನಿರ್ಮಾಣ ನಡೆಯಲಿದೆ.

735 crore grant for shirsi region new financial aid for road and bridge development

ಶಿರಸಿ ಕ್ಷೇತ್ರಕ್ಕೆ 7.35ಕೋಟಿ

ಅನುದಾನ ಮಂಜೂರು

ಶಿರಸಿ: ಶಿರಸಿ ಮತ್ತು ಸಿದ್ದಾಪುರ ಭಾಗದ ರಸ್ತೆ ಮತ್ತು ಸೇತುವೆ ಕಾಮಗಾರಿಗಳಿಗೆ ಲೋಕೋಪಯೋಗಿ ಇಲಾಖೆಯಿಂದ ಒಟ್ಟೂ 7.35ಕೋಟಿ ರೂ., ಅನುದಾನಕ್ಕೆ ಸರಕಾರದಿಂದ ಅನುಮೋದನೆ ದೊರೆತಿದೆ.

ನಗರ ವ್ಯಾಪ್ತಿಯಲ್ಲಿಬರುವ ಖಾನಾಪುರ-ತಾಳಗುಪ್ಪ ರಸ್ತೆ ಕಿ.ಮೀ 146.00 ರಿಂದ 148.00ರವರೆಗೆ ಚತುಷ್ಪಥ ರಸ್ತೆಯ ಬಾಕಿ ಇರುವ ಹೆಚ್ಚುವರಿ ಸುರಕ್ಷತಾ ಕಾಮಗಾರಿಗಳಿಗೆ 1.85 ಕೋಟಿ ರೂ. ಅನುದಾನ ಮಂಜೂರಾಗಿದೆ. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ವತಿಯಿಂದ ಕ್ಷೇತ್ರದ ವಿವಿಧೆಡೆ ಶಿಥಿಲಗೊಂಡಿರುವ ಸೇತುವೆಗಳ ಮರುನಿರ್ಮಾಣಕ್ಕಾಗಿ 5.50ಕೊಟಿ ರೂ. ಮೀಸಲಿಡಲಾಗಿದೆ. ಅದರಲ್ಲಿದೇವನಳ್ಳಿ-ಮಣದೂರು ಜಿಲ್ಲಾಮುಖ್ಯ ರಸ್ತೆಯ ಕಿ.ಮೀ 2.05 ಮತ್ತು 2.30 ರಲ್ಲಿಸೇತುವೆ ನಿರ್ಮಾಣ, ಧೋಣಿಗಾರ-ಕರೂರು ಜಿಲ್ಲಾಮುಖ್ಯ ರಸ್ತೆಯ ಕಿ.ಮೀ 4.65 ರಲ್ಲಿಶಿಥಿಲಗೊಂಡಿರುವ ಸೇತುವೆಯ ಮರುನಿರ್ಮಾಣ, ರಾಜ್ಯ ಹೆದ್ದಾರಿ 69 ರಿಂದ ಸೋಮನಹಳ್ಳಿ ಕೂಡು ರಸ್ತೆಯ ಕಿ.ಮೀ 3.85 ರಲ್ಲಿಹಳೆಯ ಸೇತುವೆಯ ಪುನರ್ ನಿರ್ಮಾಣ ಒಳಗೊಂಡಿದೆ ಎಂದು ಶಾಸಕ ಭೀಮಣ್ಣ ನಾಯ್ಕ ಕಚೇರಿ ಪ್ರಕಟಣೆ ತಿಳಿಸಿದೆ.