15ರಂದು ಯಕ್ಷಗಾನ ತಾಳಮದ್ದಳೆ

Contributed byjalandhara223149@gmail.com|Vijaya Karnataka

ಕುಮರಿಗದ್ದೆಯ ದಿ. ಎಂ.ಎಲ್‌.ರಾಮಚಂದ್ರರಾವ್‌ ಕುಟುಂಬದ ವತಿಯಿಂದ ಮಾ.15ರಂದು ಸಿಗದಾಳಿನ ಶ್ರೀ ವಿದ್ಯಾಗಣಪತಿ ಸಭಾಂಗಣದಲ್ಲಿ 23ನೇ ಹೆಜ್ಜೆಯ ಯಕ್ಷಗಾನ ತಾಳಮದ್ದಳೆ ಆಯೋಜಿಸಲಾಗಿದೆ. ಮಧ್ಯಾಹ್ನ 3ಕ್ಕೆ 'ಪ್ರಚ್ಛನ್ನ ಪಾರ್ಥ' ಕಥಾನಕ ಪ್ರದರ್ಶನಗೊಳ್ಳಲಿದೆ. ಹಿಮ್ಮೇಳ ಮತ್ತು ಮುಮ್ಮೇಳದಲ್ಲಿ ಖ್ಯಾತ ಕಲಾವಿದರು ಭಾಗವಹಿಸಲಿದ್ದಾರೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕೋರಲಾಗಿದೆ.

yakshagana talamadale workers dance and performance on 15th

ಕೊಪ್ಪ: ತಾಲೂಕಿನ ಕುಮರಿಗದ್ದೆಯ ದಿ. ಎಂ.ಎಲ್ .ರಾಮಚಂದ್ರರಾವ್ ಕುಟುಂಬದ ವತಿಯಿಂದ ಮಾ.15ರಂದು ಮಧ್ಯಾಹ್ನ 3ಕ್ಕೆ ಸಿಗದಾಳಿನ ಶ್ರೀ ವಿದ್ಯಾಗಣಪತಿ ಸಭಾಂಗಣದಲ್ಲಿ23ನೇ ಹೆಜ್ಜೆಯ ಯಕ್ಷಗಾನ ತಾಳಮದ್ದಳೆ ಆಯೋಜಿಸಲಾಗಿದೆ. ಹಿಮ್ಮೇಳದಲ್ಲಿಮುಜೆಕಾನ್ ದರ್ಶನ್ ಭಟ್ (ಭಾಗವತರು), ಹುಲುಗಾರು ಗಣೇಶಮೂರ್ತಿ (ಮದ್ದಳೆ), ನಾಗರಕೊಡಿಗೆಯ ಕೃಷ್ಣಮೂರ್ತಿ (ಚಂಡೆ), ಮುಮ್ಮೇಳದಲ್ಲಿವಿಟ್ಲದ ರಾಧಾಕೃಷ್ಣ ಕಲ್ಚಾರ್ , ಪ್ರೊ. ಪವನ್ ಕಿರಣಕೆರೆ, ಕೆಂಪನಮಕ್ಕಿಯ ರಜನೀಶ್ ಹೊಳ್ಳ, ಮೇಲುಕೊಪ್ಪದ ಅರವಿಂದ ಮತ್ತು ವಿದ್ಯಾಧರ, ಸಿಗದಾಳಿನ

ಅಶೋಕ ಮತ್ತು ಅಭಿರಾಮ ಅವರುಗಳು ‘ಪ್ರಚ್ಛನ್ನ ಪಾರ್ಥ’ ಎಂಬ ಕಥಾನಕ ಪ್ರದರ್ಶಿಸಲಿದ್ದಾರೆ. ಆಸಕ್ತರು ಹಾಜರಿರಲು ಕೋರಿದೆ.