ಚಿರತೆ ಸೆರೆಗೆ ಬೋನು ಇಟ್ಟ ಇಲಾಖೆ

Contributed byvijay.hugar@timesgroup.com|Vijaya Karnataka

ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದ ಕಣಿವೆ ಬಳಿ ಚಿರತೆ ಕಾಣಿಸಿಕೊಂಡಿದೆ. ಅರಣ್ಯ ಇಲಾಖೆ ಚಿರತೆಯ ಚಲನವಲನ ಪರಿಶೀಲಿಸಿ ಸೆರೆ ಹಿಡಿಯಲು ಬೋನು ಇರಿಸಿದೆ. ಫೆಬ್ರವರಿ 4ರಂದು ಸಿಸಿಟಿವಿ ಕ್ಯಾಮೆರಾದಲ್ಲಿ ಚಿರತೆ ಸೆರೆಯಾಗಿತ್ತು. ಸ್ಥಳೀಯರ ಮಾಹಿತಿ ಆಧರಿಸಿ ಕಾರ್ಯಾಚರಣೆ ಮುಂದುವರಿದಿದೆ. ಸೋಮವಾರ ಯಾವುದೇ ಕುರುಹು ಪತ್ತೆಯಾಗಿಲ್ಲ. ಮಂಗಳವಾರವೂ ಕಾರ್ಯಾಚರಣೆ ನಡೆಯಲಿದೆ.

forest department sets trap for leopard in noolvi village

ಚಿರತೆ ಸೆರೆಗೆ ಬೋನು ಇಟ್ಟ ಇಲಾಖೆ

ಹುಬ್ಬಳ್ಳಿ: ತಾಲೂಕಿನ ನೂಲ್ವಿ ಗ್ರಾಮದ ಕಣಿವೆ ಬಳಿ ಕಾಣಿಸಿಕೊಂಡ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆಯನ್ನು ಚುರುಕುಗೊಳಿಸಿರುವ ಅರಣ್ಯ ಇಲಾಖೆ , ಚಲನವಲನ ಪರಿಶೀಲಿಸಿ ಚಿರತೆ ಸೆರೆಗೆ ಬೋನು ಇರಿಸಿದೆ. ನೂಲ್ವಿ ಗ್ರಾಮದ ಕಣಿವೆ ಬಳಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿಫೆ.4ರಂದು ಚಿರತೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿಸ್ಥಳೀಯರ ಮಾಹಿತಿ ಆಧರಿಸಿ ಚಿರತೆ ಚಲನವನ ಪರಿಶೀಲಿಸಲಾಗುತ್ತಿದೆ. ಸೋಮವಾರ ಇಡೀ ದಿನ ಕಾರ್ಯಾಚರಣೆ ನಡೆಸಿದರೂ, ಯಾವುದೇ ಕುರುಹು ಪತ್ತೆಯಾಗಿಲ್ಲ. ನಿರಂತರ ನಿಗಾ ಇಟ್ಟಿದ್ದು, ಮಂಗಳವಾರವೂ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿ ಆರ್ .ಎಸ್ .ಉಪ್ಪಾರ ತಿಳಿಸಿದ್ದಾರೆ.