ನೇತ್ರದಾನ ಮಾಡಿ ಮಾನವೀಯತೆ ಮೆರೆದ ಕುಟುಂಬ
ವಿಕ ಸುದ್ದಿಲೋಕ ಗದಗ
ಇಲ್ಲಿನ ವೀರೇಶ್ವರ ನಗರದ ನಿವಾಸಿ ಸರ್ವಮಂಗಳ ವೀರಲಿಂಗಯ್ಯನಮಠ (78) ಮಂಗಳವಾರ ನಿಧನರಾಗಿದ್ದು, ಅವರ ಕುಟುಂಬಸ್ಥರು ಮೃತರ ನೇತ್ರಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂಸಾರ್ಥಕತೆ ಮೆರೆದಿದ್ದಾರೆ.
ಗದಗ-ಬೆಟಗೇರಿ ಲಯನ್ಸ್ ಕ್ಲಬ್ ನ ಪದಾಧಿಕಾರಿಗಳ ಮಾರ್ಗದರ್ಶನ ಹಾಗೂ ಹುಬ್ಬಳ್ಳಿಯ ನೇತ್ರಾಲಯ ಆಸ್ಪತ್ರೆಯ ಸಹಕಾರದೊಂದಿಗೆ ನೇತ್ರದಾನ ಪ್ರಕ್ರಿಯೆಯು ಯಶಸ್ವಿಯಾಗಿ ನಡೆಯಿತು. ಸಮಾಜದಲ್ಲಿನೇತ್ರದಾನದ ಬಗ್ಗೆ ಜಾಗೃತಿ ಹೆಚ್ಚಾಗುತ್ತಿರುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
ಈ ಕುರಿತು ಮಾತನಾಡಿದ ಲಯನ್ಸ್ ಕ್ಲಬ್ ನ ಕಾರ್ಯದರ್ಶಿ ರಾಜಣ್ಣ ಮಲ್ಲಾಡದ, ರಕ್ತದಾನ, ನೇತ್ರದಾನ ಹಾಗೂ ದೇಹದಾನದ ಮೂಲಕ ಸಾರ್ವಜನಿಕರು ಇತರರಿಗೆ ನೆರವಾಗಿ ಮಾದರಿಯಾಗಬೇಕೆಂಬ ನಮ್ಮ ಕ್ಲಬ್ ನ ಆಶಯಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ವೀರಲಿಂಗಯ್ಯನಮಠ ಕುಟುಂಬದ ಈ ನಿರ್ಧಾರ ಶ್ಲಾಘನೀಯ ಎಂದರು.
ನೇತ್ರ ಸ್ವೀಕಾರದ ಸಂದರ್ಭದಲ್ಲಿಕ್ಲಬ್ ನ ಅಧ್ಯಕ್ಷ ರಾಜು ವೇರ್ಣೆಕರ, ಕೋಶಾಧ್ಯಕ್ಷ ರೇಣುಕಪ್ರಸಾದ ಹಿರೇಮಠ, ಪ್ರಮುಖರಾದ ರಮೇಶ ಶಿಗ್ಲಿ, ರಾಹುಲ್ ಅರಳಿ, ವೀರೇಶ ಪಟ್ಟಣಶೆಟ್ಟಿ, ರತನ್ ದೇಸಾಯಿ, ಅಶ್ವಥ್ ಸುಲಾಖೆ, ಮಂಜುನಾಥ ವೀರಲಿಂಗಯ್ಯನಮಠ ಹಾಗೂ ಮೃತರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.
ಫೋಟೊ: 4 ಸಲೀಮ 5: ಸರ್ವಮಂಗಳ ವೀರಲಿಂಗಯ್ಯನಮಠ

