ಜಾತಕ ತೋರಿಸಲು ಬಂದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ, ಅರ್ಚಕನ ಬಂಧನ
ವಿಕ ಸುದ್ದಿಲೋಕ ಕೊಟ್ಟಿಗೆಹಾರ (ಚಿಕ್ಕಮಗಳೂರು)
ಮದುವೆಗಾಗಿ ಜಾತಕ ತೋರಿಸಲು ಬಂದ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದಲ್ಲಿದೇವಾಲಯದ ಅರ್ಚಕನ ವಿರುದ್ಧ ಬಣಕಲ್ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.
ಕೃಷ್ಣರಾವ್ (45) ಬಂಧಿತ ಆರೋಪಿ. ಈತನ ವಿರುದ್ಧ ಅತ್ಯಾಚಾರ ಮತ್ತು ಎಸ್ ಸಿ ಎಸ್ ಟಿ ದೌರ್ಜನ್ಯ ತಡೆ ಕಾಯಿದೆಯಡಿ ಪ್ರಕರಣ ದಾಖಲಾಗಿದೆ.
23 ವರ್ಷದ ಯುವತಿ ತಮ್ಮ ವಿವಾಹದ ಸಂಬಂಧ ಅರ್ಚಕ ಕೃಷ್ಣರಾವ್ ನಿಗೆ ಜಾತಕ ತೋರಿಸಲು ಹೋಗಿದ್ದಾಗ ಜಾತಕದಲ್ಲಿದೋಷವಿದೆ ಎಂದು ಹೇಳಿದ್ದ. ಬಳಿಕ ಪೂಜೆ, ಪುನಸ್ಕಾರ ಮಾಡಿಸಬೇಕೆಂದು ಹೇಳಿ ಪರಿಸ್ಥಿತಿಯ ದುರ್ಲಾಭ ಪಡೆದು 2025ರ ನವೆಂಬರ್ 23ರಿಂದ 2026ರ ಫೆ.2ರವರೆಗೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಯುವತಿ ದೂರಿನಲ್ಲಿಉಲ್ಲೇಖಿಸಿದ್ದಾರೆ. ಅರ್ಚಕ ಕೃಷ್ಣರಾವ್ ವಿವಾಹಿತನಾಗಿದ್ದು, ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ.

