ಕಾಗವಾಡ: ಇಂದಿನ ವಿಜ್ಞಾನ ಯುಗದಲ್ಲಿಬಂಜೆತನ ಸಮಸ್ಯೆಯಲ್ಲ, ಆಧುನಿಕ ಚಿಕಿತ್ಸಾ ವಿಧಾನಗಳಿಂದ ಅದನ್ನು ಉಪಚರಿಸಲು ಸಾಧ್ಯವಿದೆ. ಮುಂದುವರಿದ ರಾಷ್ಟ್ರಗಳಲ್ಲಿಬಂಜೆತನ ನಿವಾರಣೆಗೆ ಬಳಸುವ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳು ಮಿರಜ್ ನ ಸಚಿನ್ ಆಸ್ಪತ್ರೆಯಲ್ಲಿಲಭ್ಯವಿದೆ ಎಂದು ಡಾ. ಸಚಿನ್ ಸುಗಣ್ಣವರ ಹೇಳಿದರು. ಅವರು ಸಚಿನ್ ಟೆಸ್ಟ್ ಟ್ಯೂಬ್ ಬೇಬಿ ಆಸ್ಪತ್ರೆಯಲ್ಲಿಭಾನುವಾರ ಜರುಗಿದ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದ ಗಡಿ ಗ್ರಾಮಗಳ ಮಹಿಳೆಯರ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ‘‘ ಆಧುನಿಕ ವೈದ್ಯಕೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಾಕಷ್ಟು ಬೆಳೆದಿದ್ದು, ಬಂಜೆತನ ಸಮಸ್ಯೆಗೆ ಚಿಂತಿಸುವ ಅಗತ್ಯವಿಲ್ಲ. ಈಗಾಗಲೆ ಕರ್ನಾಟಕ, ಮಹಾರಾಷ್ಟ್ರ ರಾಜ್ಯಗಳ ಸಾವಿರಾರು ಜನ ಚಿಕಿತ್ಸೆ ಪಡೆದು, ಸಂತಾನ ಭಾಗ್ಯ ಹೊಂದಿದ್ದಾರೆ. ಬಂಜೆತನ ಸಮಸ್ಯೆಯಿಂದ ಬಳಲುವವರು ಪರಿಹಾರಕ್ಕಾಗಿ ಮೊ. 9765010834 ಸಂಪರ್ಕಿಸಬಹುದು,’’ ಎಂದರು. ನಾನಾ ಭಾಗಗಳಿಂದ ಆಗಮಿಸಿದ ಶಿಬಿರಾರ್ಥಿಗಳು ಹಾಗೂ ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು.

