ಕುಂದಾಪುರ: ಮೀನುಗಾರಿಕೆ ವೇಳೆ ಎದೆನೋವು ಕಾಣಿಸಿಕೊಂಡು ಮೀನುಗಾರ ಮೃತಪಟ್ಟ ಘಟನೆ ಗಂಗೊಳ್ಳಿಯಲ್ಲಿನಡೆದಿದೆ. ಇಲ್ಲಿನ ನಿವಾಸಿ ಜಗನ್ನಾಥ ಖಾರ್ವಿ(43) ಮೃತಪಟ್ಟವರು. ಶ್ರೀಗಣಮಣಿಪ್ರಸಾದ್ ನಾಡದೋಣಿಯಲ್ಲಿಕೆಲಸ ಮಾಡಿಕೊಂಡಿರುವ ಅವರು ಫೆ.27ರಂದು ಗಂಗೊಳ್ಳಿ ದಾಕುಹಿತ್ಲುವಿನಿಂದ 5 ಮಾರು ದೂರ ಅರಬ್ಬೀ ಸಮುದ್ರಕ್ಕೆ ಸಾಗಿ ದೋಣಿಯಲ್ಲಿಮೀನುಗಾರಿಕೆ ಮಾಡುತ್ತಿದ್ದ ವೇಳೆ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೆ ಸಹ ಮೀನುಗಾರರು ಅವರನ್ನು ದಡಕ್ಕೆ ತಂದು ಅಂಬ್ಯುಲೆನ್ಸ್ ಮೂಲಕ ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ಮೃತಪಟ್ಟಿದ್ದಾರೆ. ಮೃತರ ಸಹೋದರ ರಾಜೇಶ್ ಖಾರ್ವಿ ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

