ಗೂಳೂರು ಸರಕಾರಿ ಪ್ರೌಢಶಾಲೆಗೆ 60ರ ಸಂಭ್ರಮ

Contributed byrameshbabunram@gmail.com|Vijaya Karnataka

ಗೂಳೂರು ಸರಕಾರಿ ಪ್ರೌಢಶಾಲೆ 60 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅಮೃತ ಮಹೋತ್ಸವ ಆಯೋಜನೆಗೆ ಸಭೆ ನಡೆಯಿತು. ಶಾಸಕ ಎಸ್‌.ಎನ್‌.ಸುಬ್ಬಾರೆಡ್ಡಿ ಅವರು ತಮ್ಮ ಹಳೆಯ ಶಾಲೆಯನ್ನು ಜಿಲ್ಲೆಗೆ ಮಾದರಿ ಶಾಲೆಯನ್ನಾಗಿ ಮಾಡಲು ಬದ್ಧತೆ ತೋರಿದ್ದಾರೆ. ಶಾಲೆಯ ಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಶಿಕ್ಷಣ ಸಚಿವ ಮಧುಬಂಗಾರಪ್ಪ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.

60th amrut mahotsav program organized for gooluru government high school

ನಾನಾ ಓದಿದ ಶಾಲೆಯನ್ನು ಜಿಲ್ಲೆಗೆ ಮಾದರಿ ಶಾಲೆ ಮಾಡಲು ಬದ್ಧ | ಶಾಸಕ ಸುಬ್ಬಾರೆಡ್ಡಿ ಹೇಳಿಕೆ

ವಿಕ ಸುದ್ದಿಲೋಕ ಬಾಗೇಪಲ್ಲಿ

ತಾಲೂಕಿನ ಗೂಳೂರು ಸರಕಾರಿ ಪ್ರೌಢಶಾಲೆ ಸ್ಥಾಪನೆಯಾಗಿ 60 ವರ್ಷ ಪೂರೈಸಿದ ಹಿನ್ನೆಲೆಯಲ್ಲಿಅಮೃತ ಮಹೋತ್ಸವ ಕಾರ್ಯಕ್ರಮ ಆಯೋಜಿಸಲು ಶಾಸಕ ಎಸ್ .ಎನ್ .ಸುಬ್ಬಾರೆಡ್ಡಿ ನೇತೃತ್ವದಲ್ಲಿಪೂರ್ವಭಾವಿ ಸಭೆ ನಡೆಯಿತು.

ಶಾಲೆಯ ಹಳೇ ವಿದ್ಯಾರ್ಥಿಗಳೊಂದಿಗೆ ನಡೆದ ಸಭೆಯಲ್ಲಿಶಾಸಕ ಸುಬ್ಬಾರೆಡ್ಡಿ ಮಾತನಾಡಿ, ಇದು ನಾನು ಓದಿದ ಶಾಲೆ. ನನ್ನ ಬದುಕಿನಲ್ಲಿಯಶಸ್ಸಿನ ಬಗ್ಗೆ ಅಡಿಪಾಯ ಹಾಕಿದ ಶಾಲೆ, ಈ ಶಾಲೆ ಸ್ಥಾಪನೆಯಾಗಿ 60 ವರ್ಷ ತುಂಬಿದೆ. ಹಾಗಾಗಿ ಈ ಶಾಲೆಗೆ ಏನಾದರೂ ಕೊಡುಗೆ ನೀಡಬೇಕೆಂದು ಸಂಕಲ್ಪ ಮಾಡಿ ಅಮೃತ ಮಹೋತ್ಸವ ಕಾರ್ಯಕ್ರಮ ಆಯೋಜಿಸಬೇಕು ಎಂದು ನಾನು ಹಾಗೂ ಹಳೇ ವಿದ್ಯಾರ್ಥಿಗಳು ಸಭೆ ನಡೆಸಿ ತೀರ್ಮಾನಿಸಿದ್ದೇವೆ ಎಂದರು.

ಶಾಲೆಯ ಹಲವು ಕೊಠಡಿಗಳ ಬಾಗಿಲು ಮತ್ತು ಕಿಟಕಿಗಳು ಶಿಥಿಲಗೊಂಡಿರುವುದರಿಂದ ನೂತನ ಬಾಗಿಲು ಮತ್ತು ಕಿಟಕಿಗಳನ್ನು ಹಾಕಿಸಬೇಕು, ಎಲ್ಲಕೊಠಡಿಗಳಿಗೆ ಸುಣ್ಣ-ಬಣ್ಣ ಬಳಿಯುವುದು ಹಾಗೂ ಶಾಲೆ ಕಾಂಪೌಂಡ್ ದುರಸ್ತಿಗೊಳಿಸುವುದು, ಆಟದ ಮೈದಾನ ಸಮತಟ್ಟು ಮಾಡುವುದು, ಮುಖ್ಯ ರಸ್ತೆಯಿಂದ ಆಟದ ಮೈದಾನದವರೆಗೆ ಸಿಸಿ ರಸ್ತೆ ಸಭಾಂಗಣ ನಿರ್ಮಾಣ, ಶಾಲೆ ಆಸ್ತಿ ಪಾಸ್ತಿಗಳನ್ನು ಶಾಲೆ ಆಡಳಿತ ಮಂಡಳಿಗೆ ವಶಕ್ಕೆ ಪಡೆಯುವುದು, ಶಾಲೆ ಆವರಣದಲ್ಲಿನೂರಾರು ಗಿಡಗಳನ್ನು ನೆಡುವುದು, ಬಹಳ ಮುಖ್ಯವಾಗಿ ಕೆಪಿಎಸ್ ಶಾಲೆಯನ್ನು ತೆರೆಯುವುದು, ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸುವುದು, ಕಳೆದ ಬಾರಿ 10ನೇ ತರಗತಿಯಲ್ಲಿಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡುವುದು ಸೇರಿದಂತೆ ಇನ್ನು ಹಲವು ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲು ಸಭೆಯಲ್ಲಿತೀರ್ಮಾನವಾಗಿದೆ ಎಂದು ಹೇಳಿದರು.

ಈ ಕಾರ್ಯಕ್ರಮಕ್ಕೆ ಶಿಕ್ಷಣ ಸಚಿವ ಮಧುಬಂಗಾರಪ್ಪ ಆಗಮಿಸಲಿದ್ದಾರೆ. ಹಳೆಯ ವಿದ್ಯಾರ್ಥಿಗಳು ಈ ಶಾಲೆಗೆ ಏನು ಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರೆ ನಾನು ಅತ್ಯಂತ ಪ್ರಾಮಾಣಿಕವಾಗಿ ಮಾಡಲು ಸಿದ್ಧನಿದ್ದೇನೆ. ಒಟ್ಟಿನಲ್ಲಿನಾನು ಓದಿದ ಶಾಲೆಯನ್ನು ಇಡೀ ಜಿಲ್ಲೆಯಲ್ಲಿಮಾದರಿ ಶಾಲೆಯನ್ನಾಗಿ ಮಾಡಲು ಬದ್ಧನಾಗಿದ್ದೇನೆ ಎಂದು ಶಾಸಕರು ತಿಳಿಸಿದರು.

ಬೆಂಗಳೂರು ಉತ್ತರ ಜಿಲ್ಲೆಡಿಡಿಪಿಐ ಕೆ.ವೆಂಕಟೇಶ್ ಮಾತನಾಡಿ, ಶಾಸಕ ಎಸ್ .ಎನ್ . ಸುಬ್ಬಾರೆಡ್ಡಿ ಗೂಳೂರು ಹೋಬಳಿ ಕೇಂದ್ರಕ್ಕೆ ಕೆಪಿಎಸ್ ಶಾಲೆಯನ್ನು ಬಹಳ ಆಸಕ್ತಿ ವಹಿಸಿ ಕೆಪಿಎಸ್ ಶಾಲೆಯನ್ನು ಮಂಜೂರು ಮಾಡಿಸಿದ್ದಾರೆ. ಕಾರ್ಯಕ್ರಮದ ದಿನ ಘೋಷಣೆ ಮಾಡಿಸುತ್ತಾರೆ. ಜತೆಗೆ ಈ ಶಾಲೆಯ ಅಭಿವೃದ್ಧಿಗೆ ಹೆಚ್ಚಿನ ರೀತಿಯಲ್ಲಿಅನುದಾನ ನೀಡುತ್ತಿದ್ದಾರೆ. ಆದ್ದರಿಂದ ಅವರನ್ನು ಎಂದೆಂದಿಗೂ ಮರೆಯಲು ಸಾಧ್ಯವಿಲ್ಲ. ಫೆಬ್ರವರಿ ತಿಂಗಳಲ್ಲಿಅಮೃತ ಮಹೋತ್ಸವ ಕಾರ್ಯಕ್ರಮ ಮಾಡಬೇಕೆಂದು ಶಾಸಕರು ಸೂಚನೆ ನೀಡಿದ್ದಾರೆ ಎಂದರು.

ಸಭೆಯಲ್ಲಿಹಳೇ ವಿದ್ಯಾರ್ಥಿಗಳಾದ ತಾಪಂ ಮಾಜಿ ಅಧ್ಯಕ್ಷ ಎಸ್ .ಎಸ್ . ರಮೇಶ್ ಬಾಬು, ಬಿಇಒ ಎನ್ .ವೆಂಕಟೇಶಪ್ಪ, ಬಿರ್ಸಿ ಕೋರ್ಡಿನೇಟರ್ ವೆಂಕಟರಾಮಪ್ಪ, ಪಿಡಿಒಗಳಾದ ತಿಪ್ಪಯ್ಯ, ಕೃಷ್ಣಮೂರ್ತಿ, ಉಪನ್ಯಾಸಕ ನಾಗರಾಜು, ಶಾಲೆಯ ಮುಖ್ಯ ಶಿಕ್ಷಕ ವಿ.ವೆಂಕಟೇಶ್ , ಡಾ.ಪ್ರಸಾದ್ , ಡಾ.ವೆಂಕಟೇಶಪ್ಪ, ಹರಿನಾಥರೆಡ್ಡಿ, ಸೂರ್ಯನಾರಾಯಣರೆಡ್ಡಿ, ರಂಗನಾಥ್ , ಜಿ.ವೆಂಕಟೇಶ್ , ಸಿ.ಎನ್ .ಬಾಬುರೆಡ್ಡಿ, ಸುರೇಂದ್ರರೆಡ್ಡಿ, ಅನ್ವರ್ , ಸರಕಾರಿ ನೌಕರರ ಸಂಘದ ಅಧ್ಯಕ್ಷ ಹನುಮಂತರೆಡ್ಡಿ, ಚಂದ್ರ, ಸೀಮಾವಲು ಕೃಷ್ಣಪ್ಪ, ಅಂಜಿನಪ್ಪ, ರವಿಕುಮಾರ್ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.

ಚಿತ್ರಶೀರ್ಷಿಕೆ (ಬಿಪಿಎಲ್ 14)

ಗೂಳೂರು ಸರಕಾರಿ ಪ್ರೌಢಶಾಲೆಯಲ್ಲಿಶಾಸಕ ಎಸ್ .ಎನ್ .ಸುಬ್ಬಾರೆಡ್ಡಿ ಕೆಪಿಎಸ್ ಶಾಲೆ ಮಂಜೂರು ಮಾಡಿಸುವುದಾಗಿ ತಿಳಿಸಿದರು.