ದೇವಾಲಯಗಳಲ್ಲಿಎಳ್ಳು-ಬೆಲ್ಲವಿತರಣೆ

Contributed byashokvkkls@gmail.com|Vijaya Karnataka

ಕಳಸದ ಐತಿಹಾಸಿಕ ಶ್ರೀ ಕಲಶೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ಹಬ್ಬದ ನಿಮಿತ್ತ ಭಕ್ತರಿಗೆ ಎಳ್ಳು ಬೆಲ್ಲ ವಿತರಿಸಲಾಯಿತು. ಹಿಂದೂ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಉಳಿಸಲು ಧಾರ್ಮಿಕ ದತ್ತಿ ಇಲಾಖೆಯ ಆದೇಶದಂತೆ ಈ ಕಾರ್ಯಕ್ರಮ ನಡೆಯಿತು. ಜನರಲ್ಲಿ ಅರಿವು ಮೂಡಿಸಲು ಈ ವಿತರಣೆ ಮಾಡಲಾಗಿದ್ದು, ಇದು ಶ್ಲಾಘನೀಯ ಎಂದು ಅರ್ಚಕರು ತಿಳಿಸಿದರು.

distribution of sesame and jaggery in temples for makar sankranti

ವಿಕ ಸುದ್ದಿಲೋಕ ಕಳಸ

ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಇಲ್ಲಿನ ಐತಿಹಾಸಿಕ ಶ್ರೀ ಕಲಶೇಶ್ವರ ದೇವಸ್ಥಾನದಲ್ಲಿಭಕ್ತರಿಗೆ ಎಳ್ಳು-ಬೆಲ್ಲವನ್ನು ವಿತರಿಸಲಾಯಿತು.

ಹಿಂದೂ ಧರ್ಮದ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಇಲಾಖೆಯು ರಾಜ್ಯದ ಎಲ್ಲಾಅಧಿಸೂಚಿತ ದೇವಾಲಯಗಳಲ್ಲಿಮಕರ ಸಂಕ್ರಾಂತಿ ದಿನದಂದು ಕಡ್ಡಾಯವಾಗಿ ಎಳ್ಳು-ಬೆಲ್ಲವಿತರಿಸಲು ಸುತ್ತೋಲೆ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿಭಕ್ತರಿಗೆ ಎಳ್ಳು-ಬೆಲ್ಲವಿತರಿಸಲಾಗಿದೆ.

ಪ್ರತಿ ಹಬ್ಬವೂ ಒಂದಲ್ಲಾಒಂದು ಕಾರಣ ಹೊಂದಿದೆ. ಸಂಪ್ರದಾಯ, ಆಚರಣೆಗಳು ಮರೆಯಾಗುತ್ತಿರುವ ಸಂದರ್ಭದಲ್ಲಿಜನರಲ್ಲಿಅರಿವು ಮೂಡಿಸಲು ಎಳ್ಳು-ಬೆಲ್ಲವಿತರಿಸಲು ನಿರ್ಧಾರ ಕೈಗೊಂಡಿದ್ದು ಶ್ಲಾಘನೀಯ ಎಂದು ದೇವಸ್ಥಾನದ ಅರ್ಚಕರು ತಿಳಿಸಿದರು.

ಪೊಟೋ

15ಕಳಸ3 ಕಳಸದ ಕಲಶೇಶ್ವರ ದೇವಸ್ಥಾನದಲ್ಲಿಮಕರ ಸಂಕ್ರಾಂತಿ ಅಂಗವಾಗಿ ಭಕ್ತರಿಗೆ ಎಳ್ಳು ಬೆಲ್ಲಹಂಚಲಾಯಿತು.