ಕಾಲುವೆಗೆ ನೀರು ಹರಿಸಿ

Contributed byshreekanta.akki@timesofindia.com|Vijaya Karnataka
farmers and public representatives petition dc for water release to canal
ಕಾಲುವೆಗೆ ನೀರು ಹರಿಸಿ

ವಿಕ ಸುದ್ದಿಲೋಕ ಕೊಪ್ಪಳ
ವಿಜಯನಗರ ಎಡದಂಡೆ ಮುಖ್ಯ ಕಾಲುವೆಗೆ ನೀರು ಹರಿಸಬೇಕು ಎಂದು ಒತ್ತಾಯಿಸಿ ರೈತರು ಮತ್ತು ಜನಪ್ರತಿನಿಧಿಗಳ ನಿಯೋಗ ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ವಿಜಯನಗರ ಎಡದಂಡೆ 11-ಎ ಉಪ ಕಾಲುವೆವರೆಗೆ 1.5ಟಿಎಂಸಿ ನೀರು ಬಿಡುಗಡೆ ಮಾಡಬೇಕು. ನೀರು ತಲುಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಯಿತು.

ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್ , ಡಾ.ಬಸವರಾಜ್ ಕ್ಯಾವಟರ್ , ಮಾಜಿ ಶಾಸಕ ಪರಣ್ಣ ಮುನವಳ್ಳಿ, ಜಿಲ್ಲಾಧ್ಯಕ್ಷ ನವೀನ ಗುಳಗಣ್ಣನವರ, ಪ್ರಭುರಾಜ ಪಾಟೀಲ್ , ಪ್ರದೀಪ್ ಹಿಟ್ನಾಳ,

ಸುನಿಲ್ ಹೆಸರೂರು, ಅಶೋಕ ಗುಲದಳ್ಳಿ, ಬಸವರಾಜ್ ಉಳ್ಳಾಗಡ್ಡಿ, ಉಪಸ್ಥಿತರಿದ್ದರು.

ಧಿ

ಫೋಟೋ

21ಕೆಪಿಎಲ್ ಫೋಟೋ01

ಕಾಲುವೆಗೆ ನೀರು ಹರಿಸಬೇಕು ಎಂದು ಒತ್ತಾಯಿಸಿ ರೈತರು ಮತ್ತು ಜನಪ್ರತಿನಿಧಿಗಳ ನಿಯೋಗ ಕೊಪ್ಪಳ ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ್ ಅವರಿಗೆ ಮನವಿ ಸಲ್ಲಿಸಿತು.