ಪಟ್ಟಣದ ವಾಸವಿ ಮಹಲ್ ನಲ್ಲಿಶ್ರೀವಾಸವಿ ವಿದ್ಯಾಕೇಂದ್ರ ಸಿಬಿಎಸ್ ಇ ಶಾಲೆಯಿಂದ ಆಯೋಜಿಸಿದ್ದ ಚಾಮರಾಜನಗರ ಜಿಲ್ಲಾಮಟ್ಟದ ಅಂತರ ಸಿಬಿಎಸ್ ಇ ಶಾಲೆಗಳ 16 ವರ್ಷದೊಳಗಿನ ಮುಕ್ತ ಚದುರಂಗ ಪಂದ್ಯಾವಳಿ 2026ರಲ್ಲಿಒಂಭತ್ತು ಸಿಬಿಎಸ್ ಸಿ ಶಾಲೆಯಿಂದ 62 ವಿದ್ಯಾರ್ಥಿಗಳು ಭಾಗವಹಿಸಿದ್ದರು.ಶ್ರೀ ವಾಸವಿ ಸಿಬಿಎಸ್ ಇ ಶಾಲೆಯ ನಿರ್ದೇಶಕ ಡಾ. ಆಶಿಕ್ ವಿ. ಓಲೈಟಿ ಅವರು ಸ್ಪರ್ಧೆಯಲ್ಲಿವಿಜೇತರಾದ ಹತ್ತು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು.
ಚೆಸ್ ಸ್ಪರ್ಧೆ ವಿಜೇತರು: ಚಿಂತನಾ ಅರಸ್ ವಾಸವಿ ವಿದ್ಯಾ ಕೇಂದ್ರ, ಕೊಳ್ಳೇಗಾಲ, ಲಕ್ಷಿನಾಗನಾಥ್ ಜೆಎಸ್ ಎಸ್ ಪಬ್ಲಿಕ್ ಸ್ಕೂಲ್ ಚಾಮರಾಜನಗರ, ಶ್ರೇಯಸ್ ಸೇವಾ ಭಾರತಿ ಪಬ್ಲಿಕ್ ಸ್ಕೂಲ್ , ಚಾಮರಾಜನಗರ, ಶಿವಾಂಕ್ ಬಿ. ಸೇವಾ ಭಾರತಿ ಪಬ್ಲಿಕ್ ಸ್ಕೂಲ್ , ಚಾಮರಾಜನಗರ, ತನುಷ್ ಎನ್ . ಸೇವಾ ಭಾರತಿ ಪಬ್ಲಿಕ್ ಸ್ಕೂಲ್ , ಚಾಮರಾಜನಗರ, ಟೆನ್ಜಿನ್ ಲೆಕ್ಡೆನ್ ಸಂಭೋತ ಟಿಬೆಟನ್ ಶಾಲೆ, ಒಡೆಯರ ಪಾಳ್ಯ. ಪೃಥ್ವಿರಾಜ್ ಸೇವಾ ಭಾರತಿ ಪಬ್ಲಿಕ್ ಸ್ಕೂಲ್ , ಚಾಮರಾಜನಗರ, ಭಾಸ್ಕರ್ ಜಿ. ಜೆಎಸ್ ಎಸ್ ಪಬ್ಲಿಕ್ ಶಾಲೆ ಚಾಮರಾಜನಗರ, ಶ್ರೇಯಸ್ ಎ.ಪಿ. ಜೆಎಸ್ ಎಸ್ ಪಬ್ಲಿಕ್ ಶಾಲೆ, ಮೋಹಿತ್ ವೈ. ಜೆಎಸ್ ಎಸ್ ಪಬ್ಲಿಕ್ ಸ್ಕೂಲ್ ಚಾಮರಾಜನ ನಗರ.
ಫೋಟೋ ಕೆಜಿಎಲ್ 21-5
ಕೊಳ್ಳೇಗಾಲ ಪಟ್ಟಣದ ವಾಸವಿ ಮಹಲ್ ನಲ್ಲಿಚಾಮರಾಜನಗರ ಜಿಲ್ಲಾಮಟ್ಟದ ಅಂತರ ಸಿಬಿಎಸ್ ಇ ಶಾಲೆಗಳ 16 ವರ್ಷದೊಳಗಿನ ಮುಕ್ತ ಚದುರಂಗ ಪಂದ್ಯಾವಳಿ ಆಯೋಜಿಸಲಾಗಿತ್ತು.