ಹೃಧಿದಧಿಯಾಧಿಘಾಧಿತ: ಶಾಲೆಯಲ್ಲೇ ಸಂಗೀತ ಶಿಕ್ಷಕ ಸಾಧಿವು

Contributed byvkhnataraj@gmail.com|Vijaya Karnataka

ಹುಣಸೂರಿನ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಸಂಗೀತ ಶಿಕ್ಷಕ ಬಸವಣ್ಣಯ್ಯ ಅವರು ಶಾಲೆಯಲ್ಲೇ ಹೃದಯಾಘಾತದಿಂದ ನಿಧನರಾಗಿದ್ದಾರೆ. ಊಟ ಮಾಡಿ ಶಾಲೆಗೆ ಬಂದ ಅವರು ಶಿಕ್ಷಕರೊಂದಿಗೆ ಮಾತನಾಡುತ್ತಿದ್ದಾಗ ಕುಸಿದು ಬಿದ್ದಿದ್ದಾರೆ. ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. 2002ರಿಂದ ಅವರು ಇದೇ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರ ಅಂತಿಮ ದರ್ಶನ ರುದ್ರಭೂಮಿಯಲ್ಲಿ ನಡೆಯಲಿದೆ.

school music teacher basavannayya passes away due to heart attack

ಹುಣಸೂರು: ನಗರದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯ ಸಂಗೀತ ಶಿಕ್ಷಕ ಬಸವಣ್ಣಯ್ಯ(55) ಬುಧವಾರದಂದು ಶಾಲೆಯಲ್ಲೇ ಹೃದಯಾಘಾತದಿಂದ ನಿಧನರಾದರು. ಮಧ್ಯಾಹ್ನ ಊಟ ಮಾಡಿಕೊಂಡು ಶಾಲೆಗೆ ಬಂದ ಅವರು ಇತರೆ ಶಿಕ್ಷಕರೊಂದಿಗೆ ಮಾತನಾಡುತ್ತ ಕುಳಿತಿರುವಾಗಲೇ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದರೂ ಅದಾಗಲೇ ಸಾಧಿವಿಧಿಗೀಧಿಡಾಧಿಗಿಧಿದ್ದರು. ಮೃಧಿತರಿಗೆ ಪತ್ನಿ, ಧಿಪುತ್ರಿ ಇದ್ದಾರೆ. ಮೂಲತಃ ಬೆಳಗಾವಿಯವರಾಗಿದ್ದು, 2002ರಿಂದಲೂ ಇದೇ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬಿಇಒ ಮಹದೇವ್ , ಬಿ.ಆರ್ .ಸಿ.ಹೇಮಲತಾ, ಉಪ ಪ್ರಾಚಾರ್ಯ ಗೀತಾ ಹಾಗೂ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಅಂತಿಮ ದರ್ಶನ ಪಡೆದರು. ಗುರುವಾರ ಹುಣಸೂರಿನ ರುದ್ರಭೂಮಿಯಲ್ಲಿ ಅಂತಿಮ ದರ್ಶನ ನಡೆಯಲಿದೆ.