ವಿಜ್ಞಾನ ಪ್ರಯೋಗದಿಂದ ಅರಿವು ಸಾಧ್ಯ
ವಿಕ ಸುದ್ದಿಲೋಕ ಹೊರ್ತಿ
‘‘ವಿಜ್ಞಾನ ವಿಷಯದಲ್ಲಿಬರುವ 150ಕ್ಕೂ ಹೆಚ್ಚು ಪ್ರಯೋಗ ಮಾಡಿ ತೋರಿಸಿದರೆ ವಿಷಯವನ್ನು ವಿದ್ಯಾರ್ಥಿಗಳು ಬೇಗನೆ ಅರಿತುಕೊಳ್ಳಲು ಸಾಧ್ಯವಾಗುತ್ತದೆ,’’ ಎಂದು ಹೊರ್ತಿ ವಿಜ್ಞಾನ ಪ್ರಯೋಗ ತಜ್ಞ ಎಚ್ .ಆರ್ . ಭೋಸಗಿ ಹೇಳಿದರು.
ಸಮೀಪದ ಇಂಚಗೇರಿ ಸದ್ಗುರು ಮಾಧವಾನಂದ ಪ್ರಭುಜಿ ಪ್ರೌಢಶಾಲೆಯಲ್ಲಿಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ವಿಜ್ಞಾನ ವಿಷಯದ ಪ್ರಯೋಗಗಳ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.
100ಕ್ಕೂ ಹೆಚ್ಚು ಪ್ರಯೋಗಗಳನ್ನು ಮಾಡಿ ವಿದ್ಯಾರ್ಥಿಗಳಿಗೆ ವಿಷಯದ ಮನವರಿಕೆ ಮಾಡಿಕೊಟ್ಟರು.
ಶಾಲಾ ಮುಖ್ಯ ಶಿಕ್ಷಕ ಆರ್ .ಡಿ. ಬಿರಾದಾರ, ವಿಜ್ಞಾನ ವಿಷಯ ಶಿಕ್ಷಕಿ ಸ್ಮಿತಾ ನಾಯಕ, ಶಿವಣ್ಣ ಹದಿಮೂರ, ಮಹಾದೇವ ಜಂಬಗಿ, ಸಂಗಪ್ಪ ನಾಯಿಕ, ಸಹಾಯಕ ಬಾಳಪ್ಪ ಬಾಮನಿ ಮತ್ತು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಇದ್ದರು.
ಫೋಟೊ
1ಹೊರ್ತಿ 1
ಇಂಚಗೇರಿ ಮಾಧವಾನಂದ ಪ್ರಭುಜಿ ಪ್ರೌಢಶಾಲೆಯಲ್ಲಿವಿಜ್ಞಾನ ಪ್ರಯೋಗಗಳ ಪ್ರಾತ್ಯಕ್ಷಿಕೆಯನ್ನು ವಿಜ್ಞಾನ ಶಿಕ್ಷಕ ಎಚ್ .ಆರ್ . ಭೋಸಗಿ ಮಾಡಿ ತೋರಿಸಿದರು.

