ಇಂದು ಹಿರಿಯ ನಾಗರಿಕರ ರಕ್ಷಣೆಯ ಸಾಮಾಜಿಕ ಜಾಗೃತಿ

Contributed byajitha.m@timesofindia.com|Vijaya Karnataka

ಹಿರಿಯ ನಾಗರಿಕರ ರಕ್ಷಣೆ ಮತ್ತು ಜೀವನದ ಅಂತಿಮ ಹಂತದಲ್ಲಿರುವವರಿಗೆ ಸಹಾಯ ಮಾಡುವ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನವು ಮಾ. 5ರಂದು ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಆಸ್ತಿ ವಿಲ್ ಮಾಡುವುದು, ಘನತೆಯಿಂದ ಸಾಯುವ ಹಕ್ಕು, ಮತ್ತು ಗೌರವಯುತ ಮರಣದ ಬಗ್ಗೆ ಡಾ. ರವೀಂದ್ರನಾಥ ಶ್ಯಾನುಭಾಗ್‌ ಮಾಹಿತಿ ನೀಡಲಿದ್ದಾರೆ.

protection of senior citizens and dignified death social awareness program

ಉಡುಪಿ: ಹಿರಿಯ ನಾಗರಿಕರ ರಕ್ಷಣೆಗಾಗಿ ಹಾಗೂ ಜೀವನದ ಅಂತಿಮ ಹಂತದಲ್ಲಿಇರುವವರಿಗಾಗಿ ನಾವೇನು ಮಾಡಬಹುದೆನ್ನುವ ವಿಚಾರವಾಗಿ ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದಿಂದ ಸಾಮಾಜಿಕ ಜಾಗೃತಿ ಕಾರ್ಯಕ್ರಮವನ್ನು ಮಾ. 5ರಂದು ಸಂಜೆ 5 ಗಂಟೆಗೆ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿಹಮ್ಮಿಕೊಳ್ಳಲಾಗಿದೆ.

ವಿಚಾರಗೋಷ್ಠಿಯಲ್ಲಿಬದುಕಿರುವಾಗಲೇ ತಮ್ಮ ಆಸ್ತಿಗಳನ್ನು ಮುಂದಿನ ಜನಾಂಗದವರಿಗೆ ವಿಲ್ ಮಾಡುವುದು ಹೇಗೆ ಮತ್ತು ಯಾಕೆ? ಘನತೆಯಿಂದ ಸಾಯುವ ಹಕ್ಕು ಎಂದರೆ ಏನು? ಬದುಕಿನ ಕೊನೆಯಲ್ಲಿಗೌರವಯುತವಾದ ನೋವಿಲ್ಲದ ನೆಮ್ಮದಿಯ ಮರಣವನ್ನು ಪಡೆಯುವುದು ಹೇಗೆ? ಈ ವಿಚಾರವಾಗಿ ಉಡುಪಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ. ರವೀಂದ್ರನಾಥ ಶ್ಯಾನುಭಾಗ್ ಮಾಹಿತಿ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.