ವಿಕ ಸುದ್ದಿಲೋಕ ಮಂಜೇಶ್ವರ
ಪಾವೂರು ಶ್ರೀ ಕೊರಗತನಿಯ ಸಾನ್ನಿಧ್ಯ ಗೋವಿಂದ ಲಚ್ಚಿಲ್ ಕೊಂಡೆವೂರು ಇದರ ತೃತೀಯ ವಾರ್ಷಿಕೋತ್ಸವದ ಅಂಗವಾಗಿ ಶ್ರೀ ಕೊರಗ ತನಿಯ ಕೊಲೋತ್ಸವವು ಏ.3 ರಂದು ನಡೆಯಲಿದೆ. ಇದರ ಆಮಂತ್ರಣ ಪತ್ರಿಕೆಯನ್ನು ಶ್ರೀ ಅನಂತ ಪದ್ಮನಾಭ ದೇವಸ್ಥಾನ ಕೊಂಡೆವೂರು ಕ್ಷೇತ್ರದ ಪುರೋಹಿತರಾದ ಶ್ರೀ ವಿಷ್ಣುಭಟ್ ದೇವರಲ್ಲಿ ಪ್ರಾರ್ಥಿಸಿ ಬಿಡುಗಡೆಗೊಳಿಸಿದರು. ಕ್ಷೇತ್ರದ ಅಧ್ಯಕ್ಷ ಸೋಮನಾಥ ಕಾರಂತ ಮರಿಕಾಪು, ಕ್ಷೇತ್ರದ ಆಡಳಿತ ಮೊಕ್ತೇಸರರಾದ ಐತ್ತಪ್ಪ ಶೆಟ್ಟಿ ದೇವಂದ ಪಡ್ಪು , ಮೊಕ್ತೇಸರರಾದ ಪದ್ಮನಾಭ ಅಡ್ಯಂತಾಯ ಕಾಪು, ಅರುಣ್ ಕುಮಾರ್ ಶೆಟ್ಟಿ ಪೆರ್ಮನಂಜಿ ,ಜಯಪ್ರಕಾಶ್ ಆಡ್ಯಂತಾಯ ಕಾಪು , ರವಿಮುಡಿಮಾರು, ಕ್ಷೇತ್ರದ ಪದಾಧಿಕಾರಿಗಳಾದ ಚಂದ್ರಹಾಸ ಅಂಚನ್ ಮುಡಿಮಾರು, ಮಾಧವ ಪೂಜಾರಿ ಕುದುಕೋರಿ, ಪ್ರಶಾಂತ್ ಭಂಡಾರಿ ಚಾವಡಿ ಬೈಲುಗುತ್ತು, ವಾಮನ ಮುಡಿಮಾರ್ , ಚಿದಂಬರ ಶೆಟ್ಟಿ ಕೊಂಡೆ ವೂರು ವಿಶ್ವನಾಥ ಶೆಟ್ಟಿ , ಜೀವನ್ ಮುಡಿಮಾರು ,ರಾಜೇಶ್ ಮುಡಿಮಾರು, ದಯಾನಂದ ಕರ್ಕೆರ, ಸುರೇಶ್ ಪೆರ್ಮನಂಜಿ, ಉಮೇಶ್ ಕೊಂಡೆವೂರು, ಅಲ್ಲದೆ ಮಹಿಳಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
3ಎಂಜೆ6 ಪಾವೂರು

