ಬಿಎಸ್ ವೈ ಹುಟ್ಟುಹಬ್ಬ:
ಗುಂಜಾನರಸಿಂಹಸ್ವಾಮಿಗೆ ಪೂಜೆ
ವಿಕ ಸುದ್ದಿಲೋಕ ತಿ.ನರಸೀಪುರ
ಮಾಜಿ ಮುಖ್ಯಮಂತ್ರಿ ಬಿ.ಎಸ್ . ಯಡಿಯೂರಪ್ಪ ಅವರ 84ನೇ ಹುಟ್ಟುಹಬ್ಬದ ಅಂಗವಾಗಿ ಪ್ರತಿಪಕ್ಷದ ನಾಯಕ ಆರ್ .ಆಶೋಕ್ ಪಟ್ಟಣದ ಶ್ರೀ ಗುಂಜಾನರಸಿಂಹಸ್ವಾಮಿ ದೇವಸ್ಥಾನದಲ್ಲಿವಿಶೇಷ ಪೂಜೆ ಸಲ್ಲಿಸಿದರು.
ನಂತರ ಮಾತನಾಡಿದ ಅವರು, ‘‘ಬಿಜೆಪಿ ರಾಜ್ಯಾಧ್ಯಕ್ಷರಾಗಿ ಕರ್ನಾಟಕದಲ್ಲಿಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿದರು. ರೈತರ ಪರ ಹೋರಾಟ ನಡೆಸಿ ಜನಪರ ಕೆಲಸ ನಿರ್ವಹಿಸಿದ ಧೀಮಂತ ನಾಯಕನ ಜನ್ಮದಿನದ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು,’’ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಕುಂಬ್ರಳ್ಳಿ ಸುಬ್ಬಣ್ಣ, ಮಾಜಿ ವಿಧಾನ ಪರಿಷತ್ ಸದಸ್ಯ ಸಿ.ರಮೇಶ್ , ಪುರಸಭಾ ಮಾಜಿ ಸದಸ್ಯ ಎಸ್ .ಕೆ. ಕಿರಣ್ , ಅನಿಲ್ , ರಾಮಚಂದ್ರ, ದಾಸಯ್ಯ, ರಮೇಶ್ , ಸಿ.ಡಿ. ವೆಂಕಟೇಶ್ , ಲೋಕೇಶ್ ನಾಯಕ್ , ರಾಜಶೇಖರ್ ಹಾಗೂ ಇತರರು ಹಾಜರಿದ್ದರು.
ಎಂವೈಎಸ್ 1 ಟಿಎನ್ ಪಿ1
ಮಾಜಿ ಮುಖ್ಯಮಂತ್ರಿ ಬಿ.ಎಸ್ . ಯಡಿಯೂರಪ್ಪರ 84ನೇ ಹುಟ್ಟುಹಬ್ಬದ ಅಂಗವಾಗಿ ತಿ.ನರಸೀಪುರ ಪಟ್ಟಣದ ಶ್ರೀ ಗುಂಜಾನರಸಿಂಹಸ್ವಾಮಿ ದೇವಸ್ಥಾನದಲ್ಲಿಪ್ರತಿಪಕ್ಷದ ನಾಯಕ ಆರ್ . ಅಶೋಕ್ ವಿಶೇಷ ಪೂಜೆ ಸಲ್ಲಿಸಿದರು.

