ವಿಕ ಸುದ್ದಿಲೋಕ ಕಾರ್ಕಳ
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಜೆಸಿಐ ಬೆಳ್ಮಣ್ ಹಾಗೂ ಚೈತನ್ಯ ಮಿತ್ರಮಂಡಳಿ ಕಲ್ಯಾ, ಚೈತನ್ಯ ಮಹಿಳಾ ಹಾಗೂ ಯುವತಿ ಮಂಡಳಿ ಕಲ್ಯಾ ಆಶ್ರಯದಲ್ಲಿವಿಶೇಷ ಕಾರ್ಯಕ್ರಮ ಜರುಗಿತು.
ವಲಯ ತರಬೇತುದಾರೆ ಜಯಂತಿ ಶೆಟ್ಟಿ ಅವರು ಪ್ರೇರಣಾದಾಯಕ ತರಬೇತಿ ಕಾರ್ಯಕ್ರಮ ನಡೆಸಿದರು. ಕೃಷಿ ಮತ್ತು ಹೈನುಗಾರಿಕೆ ಕ್ಷೇತ್ರದ ಸಾಧಕಿ ಶಶಿಕಲಾ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಬೆಳ್ಮಣ್ ಜೇಸಿಐ ಅಧ್ಯಕ್ಷ ವೀರೇಂದ್ರ ಆರ್ .ಕೆ., ಕಾರ್ಯದರ್ಶಿ ಶ್ವೇತಾ ಆಚಾರ್ಯ, ಚೈತನ್ಯ ಮಿತ್ರಮಂಡಳಿ ಅಧ್ಯಕ್ಷ ಧೀರಜ್ ಶೆಟ್ಟಿ, ಚೈತನ್ಯ ಮಹಿಳಾ ಮಂಡಳಿ ಅಧ್ಯಕ್ಷೆ ಕವಿತಾ ಗುರುಮೂರ್ತಿ, ಸ್ಥಾಪಕ ಅಧ್ಯಕ್ಷೆ ರೂಪಾ ಯತೀಶ್ , ಸುರಭಿ ಮಹಿಳಾ ಮಂಡಳಿ ಅಧ್ಯಕ್ಷೆ ಉಷಾ ವಿವೇಕ್ ಉಪಸ್ಥಿತರಿದ್ದರು.
ಫೊಟೋಕ್ಯಾಪ್ಶನ್ -ಕೃಷಿ ಮತ್ತು ಹೈನುಗಾರಿಕೆ ಕ್ಷೇತ್ರದ ಸಾಧಕಿ ಶಶಿಕಲಾ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ¨ಫೊಟೋ:9ಕೆವಿ-ಕೆಎಂಡಿ)

