ವೀರಶೈವ ಲಿಂಗಾಯತ
ಸಮಾಜದಿಂದ ಇಫ್ತಾರ್ ಕೂಟ
ವಿಕ ಸುದ್ದಿಲೋಕ ಗಜೇಂದ್ರಗಡ
ಸಮೀಪದ ಗೋಗೇರಿ ಗ್ರಾಮದಲ್ಲಿವೀರಶೈವ ಲಿಂಗಾಯತ ಸಮಾಜದ ವತಿಯಿಂದ ರಂಜಾನ್ ಹಬ್ಬ ಉಪವಾಸ ನಿರತರಿಗೆ ಸೌಹಾರ್ದ ಇಫ್ತಾರ್ ಕೂಟ ನಡೆಯಿತು. ಹಿಂದೂ, ಮುಸ್ಲಿಂ ಭಾಂದವರು ಪರಸ್ಪರ ಕೈ ತುತ್ತು ನೀಡುವ ಮೂಲಕ ಸಂತಸ ವ್ಯಕ್ತಪಡಿಸಿದರು.
ಶರಣ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಬಸವರಜ ಕೊಟಗಿ ಮಾತನಾಡಿ, ದೇಶದ ಭವಿಷ್ಯದ ಹಿತದೃಷ್ಟಿಯಿಂದ ಇಂತಹ ಸೌಹಾರ್ದ ಕೂಟಗಳ ಅಗತ್ಯವಿದೆ. ಇದರಿಂದ ಅಂತರ್ ಧರ್ಮೀಯ ಆಚಾರ, ವಿಚಾರಗಳ ವಿನಿಮಯವು ಸಾಧ್ಯವಾಗಲಿದೆ. ಪರಸ್ಪರ ಅರಿಯುವ ಅವಕಾಶವೂ ಸಿಗಲಿದೆ. ಅನುಮಾನವೂ ದೂರವಾಗಲಿದೆ ಎಂದರು.
ಪ್ರೊ.ಬಿ.ಎ.ಕೆಂಚರಡ್ಡಿ, ಅಮರೇಶ ಗಾಣಿಗೇರ, ಬಸವರಾಜ ಮೂಲಿಮನಿ, ಉರ್ದು ಶಾಲೆಯ ಮುಖ್ಯೋಪಾದ್ಯಾಯ ಆರ್ .ವೈ.ಬಾಗವಾನ, ಹುಸೇನಸಾಬ ಬಡಿಗೇರ, ವೀರಶೈವ ಸಮಾಜದ ಅಧ್ಯಕ್ಷ ಈರಣ್ಣ ಮೂಲಿಮನಿ, ಹುಸೇನ ನಿಡಗುಂದಿ, ಇಮಾಮಸಾಬ ಬಾಗವಾನ, ಬಸಪ್ಪ ಗುಂಡೆ, ಕೆ.ಕೆ.ಬಾಗವಾನ, ಇಮಾಮ ಹಾದಿಮನಿ, ದಸ್ತಗೀರ ನಧಾಪ್ , ರುದ್ರೇಶ ಕೆರಿ, ಮಾತಾಂರ್ ಡಪ್ಪ ಹದ್ದಣ್ಣವರ, ದಸ್ತಗೀರ ವಾಲಿಕಾರ, ಶಾಬುದ್ದೀನ ನಧಾಪ್ , ಆರ್ .ಕೆ.ಬಾಗವಾನ ಇದ್ದರು.
ಫæäೕಟೊ: 8 ಜಿಜೆಡಿ 1:
ಗೋಗೇರಿ ಗ್ರಾಮದಲ್ಲಿವೀರಶೈವ ಲಿಂಗಾಯತ ಸಮಾಜದಿಂದ ರಂಜಾನ್ ಹಬ್ಬ ಉಪವಾಸ ನಿರತರಿಗೆ ಸೌಹಾರ್ದ ಇಫ್ತಾರ್ ಕೂಟ ನಡೆಯಿತು.

