ಕಾಸರಗೋಡು: ಬೇಸಗೆ ತೀವ್ರಗೊಂಡ ಹಿನ್ನೆಲೆಯಲ್ಲಿಪಕ್ಷಿಗಳಿಗೆ ದಾಹ ನೀಗಿಸಲು ನಾಯಮ್ಮಾರೆಮೂಲೆ ತನ್ ಬೀಹುಲ್ ಇಸ್ಲಾಂ ಹೈಯರ್ ಸೆಕೆಂಡರಿ ಶಾಲೆಯಲ್ಲಿಪಾನಪಾತ್ರೆ ವ್ಯವಸ್ಥೆಗೊಳಿಸಲಾಯಿತು. ಶಾಲಾ ಜೆಆರ್ ಸಿ ಘಟಕ ಹಾಗೂ ಸಂಸ್ಕೃತ ಕ್ಲಬ್ ಸಂಯುಕ್ತವಾಗಿ ಪಾನಪಾತ್ರೆ ಯೋಜನೆಯನ್ನು ನಿರ್ವಹಿಸುತ್ತಿದೆ.
ಬೇಸಗೆ ಕಾಲದಲ್ಲಿಜಲಸಂಪನ್ಮೂಲಗಳು ಬತ್ತಿಹೋಗುವ ಹಿನ್ನೆಲೆಯಲ್ಲಿಪಕ್ಷಿಗಳು ನೀರು ಲಭಿಸದೆ ಅಸ್ವಸ್ಥಗೊಳ್ಳುತ್ತವೆ.ಈ ಹಿನ್ನೆಲೆಯಲ್ಲಿಪಾನಪಾತ್ರೆ ವ್ಯವಸ್ಥೆಗೊಳಿಸಲಾಯಿತು.
ಜಿಲ್ಲಾಶಿಕ್ಷಣ ಉಪನಿರ್ದೇಶಕ ವಿ.ಇಬ್ರಾಹಿಂ ಉದ್ಘಾಟಿಸಿದರು.ಮುಖ್ಯ ಶಿಕ್ಷಕ ಪಿ.ಕೆ.ಅನಿಲ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕಿ ಶ್ರೀಮ, ಮಹೆಶ್ ಕುಮಾರ್ ,ಪಿ.ಐ.ಅಬ್ದುಲ್ ಲತೀಫ್ , ಪ್ರಜಿತ ಮತ್ತಿತರರು ಮಾತನಾಡಿದರು.
ಚಿತ್ರ: 3ಕೆಎಸ್ ಎಲ್ ಪಾನಪಾತ್ರೆ- ಜಿಲ್ಲಾಶಿಕ್ಷಣ ಉಪನಿರ್ದೇಶಕ ವಿ. ಇಬ್ರಾಹಿಂ ಉದ್ಘಾಟಿಸಿದರು.

