ವಿಕ ಸುದ್ದಿಲೋಕ ಬೆಳಗಾವಿ
ಇಲ್ಲಿನ ಹನುಮಾನ ನಗರದಲ್ಲಿನಡೆದ ಕಾರು ಕಳ್ಳತನಕ್ಕೆ ಸಂಬಂಧಿಸಿದಂತೆ ಎಪಿಎಂಸಿ ಠಾಣೆಯ ಪೊಲೀಸರು ಎರಡು ಕಾರು ವಶಕ್ಕೆ ಪಡೆದಿದ್ದಾರೆ.
ಹನುಮಾನ ನಗರದ ಪ್ರಿಯಾಂಕ ಅಜರೇಕರ್ ಎಂಬುವರು ಮೇ 10ರಂದು ತಮ್ಮ ಮನೆ ಮುಂದೆ ನಿಲ್ಲಿಸಿದ್ದ ಕಿಯಾ ಸೆಲ್ಟೊಸ್ ಕಾರು ಕಳ್ಳತನ ಆಗಿರುವ ಬಗ್ಗೆ ಎಪಿಎಂಸಿ ಠಾಣೆಗೆ ದೂರು ನೀಡಿದ್ದರು. ಈ ಕುರಿತು ತನಿಖೆ ಕೈಗೊಂಡಿದ್ದ ಪೊಲೀಸರು, ಮಹಾರಾಷ್ಟ್ರದ ಮುಂಬೈನಲ್ಲಿಕಾರು ಪತ್ತೆ ಹಚ್ಚಿದ್ದರು. ಧಾರವಾಡ ಉಪನಗರ ಠಾಣೆ ವ್ಯಾಪ್ತಿಯಲ್ಲಿಕಳ್ಳನವಾಗಿದ್ದ ಹುಂಡೈ ಕ್ರೆಟಾ ಕಾರು ಕೂಡ ಇದೇ ಸ್ಥಳದಲ್ಲಿಪತ್ತೆಯಾಗಿದೆ. ಆರೋಪಿಗಳು ಪರಾರಿಯಾಗಿದ್ದು, ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

