ಡಿಸಿಎಂ ಸ್ಥಾನ ನೀಡಿ
ವಿಕ ಸುದ್ದಿಲೋಕ ಕೊಪ್ಪಳ
‘‘ಮಾದಿಗ ಸಮುದಾಯದ ಅಭಿವೃದ್ಧಿಯ ದೃಷ್ಟಿಯಿಂದ ಕೆ.ಎಚ್ .ಮುನಿಯಪ್ಪ ಅವರಿಗೆ ಡಿಸಿಎಂ ಸ್ಥಾನ ನೀಡಬೇಕು,’’ ಎಂದು ಮಾದಿಗ ಸಮುದಾಯದ ಜಿಲ್ಲಾಮುಖಂಡ ಮಲ್ಲಿಕಾರ್ಜುನ ಪೂಜಾರಿ
ಒತ್ತಾಯಿಸಿದರು.
ನಗರದಲ್ಲಿಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘‘ಮುನಿಯಪ್ಪ ಅವರು 5 ದಶಕಗಳಿಂದ ಕಾಂಗ್ರೆಸ್ ಗೆ ನಿಷ್ಠೆ, ಶಿಸ್ತು ಹಾಗೂ ಬದ್ಧತೆಯಿಂದ ಸೇವೆ ಸಲ್ಲಿಸಿದ್ದಾರೆ. ಏಳು ಸಲ ಸಂಸದ ಸದಸ್ಯರಾಗಿರುವ ಅವರು 3 ದಶಕಗಳ ಕಾಲ ಸಂಸತ್ತಿನಲ್ಲಿಸೇವೆ ಸಲ್ಲಿಸಿದ್ದಾರೆ. 10 ವರ್ಷ ಕೇಂದ್ರ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಅಪಾರ ರಾಜಕೀಯ ಜ್ಞಾನ ಹಾಗೂ ಸಮುದಾಯದ ಮೇಲೆ ಕಾಳಜಿ ಇರುವ ಅವರು ಡಿಸಿಎಂ ಸ್ಥಾನಕ್ಕೆ ಅರ್ಹರಾಗಿದ್ದಾರೆ. ಹೀಗಾಗಿ, ಅವರಿಗೆ ನೂತನ ಸಂಪುಟದಲ್ಲಿಡಿಸಿಎಂ ಸ್ಥಾನ ನೀಡಬೇಕು,’’ ಎಂದು ಆಗ್ರಹಿಸಿದರು. ಮಾದಿಗ ಮಹಾಸಭಾದ ಜಿಲ್ಲಾಮುಖಂಡರಾದ ಪ್ರಕಾಶ, ಜಯರಾಜ, ರಮೇಶ ಗಾಯಕ್ ವಾಡ, ಡಿ.ಎಂ.ಪೂಜಾರ ಇದ್ದರು.

