ಕಾಸರಗೋಡು: ಬೇಸಗೆ ರಜೆಯಲ್ಲಿ ಗ್ರಂಥಾಲಯ ಸಮಿತಿಯು ವಿದ್ಯಾರ್ಥಿಗಳಿಗಾಗಿ ನಡೆಸುತ್ತಿರುವ ಕಾರ್ಯಕ್ರಮದ ಅಂಗವಾಗಿ ಅಂಗಡಿಮೊಗರು ಬಿ. ಕೆ. ಮೊಹಮ್ಮದ್ ಮಾಸ್ಟರ್ ಗ್ರಂಥಾಲಯದ ನೇತೃತ್ವದಲ್ಲಿಪ್ರಕೃತಿಯಾತ್ರೆ ನಡೆಯಿತು.
ಮಂಜು, ಕಾಡು, ಗಾಳಿ, ಪಕ್ಷಿಗಳು ತುಂಬಿಕೊಂಡಿರುವ ಪೊಸಡಿಗುಂಪೆಗೆ ಮಕ್ಕಳು ಪ್ರಯಾಣ ಬೆಳೆಸಿದರು. ಒಂದು ಭಾಗದಲ್ಲಿನೇತ್ರಾವತಿ ನದಿ, ಇನ್ನೊಂದೆಡೆ ದೂರದ ಅರಬಿಸಮುದ್ರ, ಮಂಗಳೂರು ನಗರದ ಭಾಗಗಳು ಮೊದಲಾದವುಗಳನ್ನು ಬೆಟ್ಟದ ತುಂದಿಯಿಂದ ನೋಡಿ ಮಕ್ಕಳು ಹಿಂತಿರುಗಿದರು. ನಾನಾ ಪಕ್ಷಿಗಳು, ಹೂವುಗಳು, ಸೂರ್ಯಾಸ್ತಮಾನದ ಭಂಗಿಯನ್ನು ಮಕ್ಕಳು ಆಸ್ವಾದಿಸಿದರು. ಜಿಲ್ಲಾಗ್ರಂಥಾಲಯ ಸಮಿತಿ ಸದಸ್ಯ ಬಶೀರ್ ಕೊಟ್ಯೂಡಲ್ , ಪ್ರೇಮ ಎಸ್ . ರೈ, ಸಯೀದ್ ಪರ್ಲಾಡಂ ಮಕ್ಕಳೊಂದಿಗಿದ್ದರು.
ಚಿತ್ರ: 29ಕೆಎಸ್ ಎಲ್ ಗುಂಪೆ

