ನವವಿವಾಹಿತೆ ವಿಷ ಸೇವಿಸಿ ಮೃತ್ಯು

Contributed byprakashamailankote@gmail.com|Vijaya Karnataka

ಬೇತೂರುಪಾರೆ ನಿವಾಸಿ ಅಶ್ವತಿ ಎಂಬ ನವ ವಿವಾಹಿತೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಏಪ್ರಿಲ್ 5ರಂದು ವಿವಾಹವಾಗಿದ್ದ ಅಶ್ವತಿ, ಮೇ 18ರಂದು ತಮ್ಮ ನಿವಾಸದಲ್ಲಿ ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿದ್ದರು. ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

newlyweds poison consumption is there a deeper reason

ಬೇಡಡ್ಕ: ನವ ವಿವಾಹಿತೆ ಅಶ್ವತಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬೇತೂರುಪಾರೆ ವಟ್ಟಂತಟ್ಟ ದಿ. ಸುಗು ಅವರ ಪುತ್ರಿ ಅಶ್ವತಿ(25) ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿನರ್ಸ್ ಆಗಿದ್ದು, ಅಂಬಲತ್ತರ ಪರಕ್ಕಳಾಯಿ ಚೀಟಕ್ಕಾವು ರೂಪೇಶ್ ಅವರ ಪತ್ನಿ. ಅವರ ವಿವಾಹವು ಏ. 5 ರಂದು ನಡೆದಿತ್ತು.

ಮೇ 18ರಂದು ತನ್ನ ಕಾಸರಗೋಡಿನ ನಿವಾಸದಲ್ಲಿವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿದ್ದ ಅಶ್ವತಿಯನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತರಾದರು. ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಚಿತ್ರ.. 30ಎಂಯುಅಶ್ವತಿ