26ರಂದು ಕ್ಯಾಂಪ್ಕೋ ಶಾಖೆ ಉದ್ಘಾಟನೆ

Contributed byprasadsarali@gmail.com|Vijaya Karnataka

ಕಾಸರಗೋಡು: ಕ್ಯಾಂಪ್ಕೋ ನಿಯಮಿತ ಸಂಸ್ಥೆಯು ಮೇ 26ರಂದು ಬೆಳಗ್ಗೆ 10.30ಕ್ಕೆ ಪಯ್ಯನ್ನೂರು ತಾಲೂಕು ಮಾತಮಂಗಲಂನಲ್ಲಿ ತನ್ನ ನೂತನ ಶಾಖೆಯನ್ನು ಉದ್ಘಾಟಿಸಲಿದೆ. ಹಿರಿಯ ರೈತ ಸದಸ್ಯರು ಮತ್ತು ಶಾಸಕ ಪಿ. ಕುಂಞ್ಞಿಕೃಷ್ಣನ್‌ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕ್ಯಾಂಪ್ಕೋ ಅಧ್ಯಕ್ಷ ಎಸ್‌. ಆರ್‌. ಸತೀಶ್ಚಂದ್ರ ಅವರು ಅಧ್ಯಕ್ಷತೆ ವಹಿಸಲಿದ್ದು, ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ.

inauguration of kampco branch in payyanur all details

ಕಾಸರಗೋಡು : ಕಣ್ಣೂರು ಜಿಲ್ಲೆಯ ಪಯ್ಯನ್ನೂರು ತಾಲೂಕು ಮಾತಮಂಗಲಂ ಎಂಬಲ್ಲಿಕ್ಯಾಂಪ್ಕೋ ನಿಯಮಿತ ಸಂಸ್ಥೆಯ ಶಾಖೆಯು ಮೇ 26ರಂದು ಬೆಳಗ್ಗೆ 10.30ಕ್ಕೆ ಉದ್ಘಾಟನೆಗೊಳ್ಳಲಿರುವುದು.

ಹಿರಿಯ ರೈತ ಸದಸ್ಯರು ಉದ್ಘಾಟಿಸಲಿದ್ದಾರೆ. ಕ್ಯಾಂಪ್ಕೋ ನಿರ್ದೇಶಕ ರಾಧಾಕೃಷ್ಣನ್ ಕರಿಂಜಾಲ್ ಸ್ವಾಗತಿಸಲಿರುವರು. ಪಯ್ಯನ್ನೂರು ವಿಧಾನಸಭಾ ಕ್ಷೇತ್ರ ಶಾಸಕ ಪಿ. ಕುಂಞ್ಞಿಕೃಷ್ಣನ್ ಉದ್ಘಾಟಿಸಲಿರುವರು. ಕ್ಯಾಂಪ್ಕೋ ಅಧ್ಯಕ್ಷ ಎಸ್ . ಆರ್ . ಸತೀಶ್ಚಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ. ವ್ಯವಸ್ಥಾಪಕ ನಿರ್ದೇಶಕ ಡಾ. ಬಿ.ವಿ.ಸತ್ಯನಾರಾಯಣ, ಎರಮಂ ಕುಟ್ಟೂರು ಪಂಚಾಯಿತಿ ಅಧ್ಯಕ್ಷೆ ಪ್ರೀತ ಕೆ., ವಾರ್ಡ್ ಸದಸ್ಯ ಬಿಂದು ಪಿ.ವಿ. ಮುಖ್ಯಅತಿಥಿಗಳಾಗಿ ಪಾಲ್ಗೊಳ್ಳಲಿರುವರು. ಕ್ಯಾಂಪ್ಕೋ ಉಪಾಧ್ಯಕ್ಷ ಪದ್ಮರಾಜ ಪಟ್ಟಾಜೆ ವಂದಿಸಲಿರುವರು.