ಬೆಳ್ತಂಗಡಿ : ಇತ್ತೀಚೆಗೆ ಅಗಲಿದ ಸಾಮಾಜಿಕ ಮುಂದಾಳು, ಮಿತ್ತಬಾಗಿಲು ಗ್ರಾಮದ ದಿಡುಪೆಯ ಎನ್ .ಕೆ.ಫಡಕೆ ಅವರಿಗೆ ನುಡಿನಮನ ಕಾರ್ಯಕ್ರಮ ಮುಂಡಾಜೆಯ ಸನ್ಯಾಸಿಕಟ್ಟೆ ಶ್ರೀ ಪರಶುರಾಮ ದೇವಸ್ಥಾನದ ಸಭಾಂಗಣದಲ್ಲಿಭಾನುವಾರ ಜರುಗಿತು.
ಬೆಳ್ತಂಗಡಿ ಚಿತ್ಪಾವನ ಸಂಘದ ಅಧ್ಯಕ್ಷ ತ್ರಿವಿಕ್ರಮ ಹೆಬ್ಬಾರ್ , ಬೆಂಗಳೂರು ಚಿತ್ಪಾವನ ಸಂಘದ ಮನೋಹರ ಗೋಖಲೆ, ದಿಡುಪೆಯ ಜಯಂತ ಹೆಗ್ಡೆ, ಪುರೋಹಿತ ನಾರಾಯಣ ಗೋಖಲೆ, ನಿವೃತ್ತ ಬ್ಯಾಂಕ್ ಮ್ಯಾನೇಜರ್ ತಿರುಮಲೇಶ್ವರ ಭಟ್ , ಭೂಮಿಕಾ, ಹಿರಿಯ ಸಹಕಾರಿ ಕರುಣಾಕರ ಗೋಗಟೆ ಮತ್ತಿತರರು ನುಡಿನಮನ ಸಲ್ಲಿಸಿದರು.ಪತ್ನಿ ರಾಧಾ ಫಡಕೆ, ಮಕ್ಕಳಾದ ಗಿರೀಶ್ ಫಡಕೆ, ಶ್ರೀರಾಮ್ ಫಡಕೆ, ರಾಜೇಶ್ ಫಡಕೆ,ಗುರುಪ್ರಸಾದ್ ಫಡಕೆ, ಪುತ್ರಿ ಪೂರ್ಣಿಮಾ, ಸಹೋದರ ಕೇಶವ ಫಡಕೆ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು. ಹಿರಿಯ ಸಹಕಾರಿ ನಾರಾಯಣ ಫಡಕೆ ಕಾರ್ಯಕ್ರಮ ನಿರೂಪಿಸಿದರು.
20ಎಂಜೆ ಎನ್ ಕೆ ನುಡಿ.
ಚಿತ್ರ ವಿವರ-
ಇತ್ತೀಚೆಗೆ ಅಗಲಿದ ಎನ್ .ಕೆ.ಫಡಕೆ ಅವರಿಗೆ ಸಾರ್ವಜನಿಕರು ನುಡಿನಮನ ಸಲ್ಲಿಸಿದರು.