ಕಲಘಟಗಿ: ತಾಲೂಕಿನ ಜಿನ್ನೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಇತ್ತೀಚೆಗೆ ನಡೆದ 2026-27ನೇ ಸಾಲಿನ ತಬಕದಹೊನ್ನಳ್ಳಿ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿಜಿನ್ನೂರ ಶಾಲೆಯ ವಿದ್ಯಾರ್ಥಿಗಳು ವೀರಾಗ್ರಣಿ ಪ್ರಶಸ್ತಿ ಪಡೆದಿದ್ದಾರೆ.ಶಾಲೆಯ ಆವರಣದಲ್ಲಿಆಯೋಜಿಸಿದ್ದ ಕ್ರೀಡಾಕೂಟವನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಮುರಳ್ಳಿ ಉದ್ಘಾಟಿಸಿದರು. ಬಾಲಕಿಯರ ಖೋಖೋ, ಕಬಡ್ಡಿ ಹಾಗೂ ರಿಲೇ ಸ್ಪರ್ಧೆಗಳಲ್ಲಿಪ್ರಥಮ ಸ್ಥಾನ ಪಡೆದರೆ, ಬಾಲಕರು ಖೋಖೋ ಹಾಗೂ ಕಬಡ್ಡಿ ಪಂದ್ಯಗಳಲ್ಲಿಪ್ರಥಮ ಸ್ಥಾನ ಪಡೆದರು.