ಇಲ್ಲಿನ ಜೆಎಂಎಫ್ ಸಿ ನ್ಯಾಯಾಲಯದ ಆವರಣದಲ್ಲಿಶನಿವಾರ ರಾಷ್ಟ್ರೀಯ ಲೋಕ ಅದಾಲತ್ ನಡೆಯಿತು.ಲೋಕ ಅದಾಲತ್ ನಲ್ಲಿ35 ಎನ್ .ಐ ಆ್ಯಕ್ಟ್ ಪ್ರಕರಣಗಳು, 15 ಅಮಲಜಾರಿ ಪ್ರಕರಣಗಳು, 7 ಮೂಲ ದಾವಾ ಪ್ರಕರಣಗಳು, 37 ಕ್ರಿಮಿನಲ್ ಮಿಸ್ಲೇನಿಯಸ್ ಪ್ರಕರಣಗಳು, 98 ಕೆ.ಪಿ. ಅ್ಯಕ್ಟ್ ಪ್ರಕರಣಗಳು ಹಾಗೂ ಇತರೆ ಪ್ರಕರಣಗಳು ಸೇರಿದಂತೆ ನ್ಯಾಯಾಲಯದಲ್ಲಿಬಾಕಿಯಿದ್ದ 195 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಯಿತು.
ಅದೇ ರೀತಿ 1,02,540 ಪ್ರಿ-ಲಿಟಿಗೇಷನ್ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಲಾಯಿತು. ನ್ಯಾಯಿಕ ಸಂಧಾನಕಾರರಾಗಿ ನ್ಯಾಯಾಧೀಶ ಶಿವರಾಜು ಎಚ್ .ಎಸ್ . ಹಾಗೂ ನ್ಯಾಯಕೇತರ ಸಂಧಾನಕಾರರಾಗಿ ವಕೀಲ ಮಹಾದೇವಪ್ಪ ಟಿಕ್ಕೋಜಿ ಉಪಸ್ಥಿತರಿದ್ದರು.
ಈ ವೇಳೆ ವಕೀಲ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಹಿರಿಯ ಮತ್ತು ಕಿರಿಯ ವಕೀಲರು, ವಿವಿಧ ಬ್ಯಾಂಕ್ ವ್ಯವಸ್ಥಾಪಕರು ಹಾಗೂ ವಿವಿಧ ಇಲಾಖೆಗಳ ಮುಖ್ಯಸ್ಥರು ಇದ್ದರು.
20ಎಮ್ ಎನ್ ಡಿ1
ಮುಂಡಗೋಡ ಜೆಎಂಎಫ್ ಸಿ ನ್ಯಾಯಾಲಯದಲ್ಲಿರಾಷ್ಟ್ರೀಯ ಲೋಕ ಅದಾಲತ್ ನಡೆಯಿತು.