ಮೇಕೆದಾಟು ಯೋಜನೆ ಶೀಘ್ರ ಅನುಷ್ಠಾನಕ್ಕೆ ಆಗ್ರಹ

Contributed byanjukumaranju6044@gmail.com|Vijaya Karnataka

ಮೇಕೆದಾಟು ಯೋಜನೆ ಶೀಘ್ರ ಅನುಷ್ಠಾನಕ್ಕೆ ಕಸ್ತೂರಿ ಕರ್ನಾಟಕ ರಕ್ಷಣಾ ಸೇನೆ ಆಗ್ರಹಿಸಿದೆ. ಸುಪ್ರೀಂ ಕೋರ್ಟ್‌ ಜನಪರ ತೀರ್ಪು ನೀಡಿದೆ. ರಾಮನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಯೋಜನೆ ಉಪಯೋಗವಾಗಲಿದೆ. ತಮಿಳುನಾಡು ಸಹಕಾರ ನೀಡಿದರೆ ಅಲ್ಲಿನ ರೈತರಿಗೂ ಅನುಕೂಲವಾಗಲಿದೆ. ಅಧಿಕಾರದಲ್ಲಿರುವ ಕಾಂಗ್ರೆಸ್ ಕೂಡಲೇ ಕಾಮಗಾರಿ ಆರಂಭಿಸಬೇಕು.

demand for swift implementation of mekedatu project

ವಿಕ ಸುದ್ದಿಲೋಕ ಹಾರೋಹಳ್ಳಿ ಮೇಕೆದಾಟು ಯೋಜನೆ ವಿಚಾರವಾಗಿ ಸುಪ್ರೀಂ ಕೋರ್ಟ್ ಜನಪರ ತೀರ್ಪನ್ನು ನೀಡಿದ್ದು, ರಾಜ್ಯ ಸರಕಾರ ಆದಷ್ಟು ಬೇಗ ಮೇಕೆದಾಟು ಯೋಜನೆ ಕಾಮಗಾರಿ ಪ್ರಾರಂಭಿಸಬೇಕು ಎಂದು ಕಸ್ತೂರಿ ಕರ್ನಾಟಕ ರಕ್ಷಣಾ ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಆಂಜನಪ್ಪ ಆಗ್ರಹಿಸಿದರು. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಮೇಕೆದಾಟು ಯೋಜನೆಯಿಂದ ರಾಮನಗರ , ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಜಿಲ್ಲೆಗಳಿಗೆ ಉಪಯೋಗ ವಾಗಲಿದ್ದು, ಈ ನಿಟ್ಟಿನಲ್ಲಿಸುಪ್ರೀಂ ಕೋರ್ಟ್ ಜನಪರ ನಿಲುವನ್ನು ಪ್ರಕಟಿಸಿದೆ. ಮೇಕೆದಾಟು ಯೋಜನೆ ವಿಚಾರವಾಗಿ ತಮಿಳುನಾಡು ಸಹಕಾರ ನೀಡಿದರೆ, ಆ ಭಾಗದ ರೈತರಿಗೂ ಅನು ಕೂಲಆಗಲಿದೆ. ರಾಜ್ಯ ಸರಕಾರ ಶೀಘ್ರವೇ ಇತ್ತ ಗಮನಹರಿಸಿ ಕಾಮಗಾರಿ ಆರಂಭಿಸಬೇಕು. ಈ ಹಿಂದೆ ಮೇಕೆ ದಾಟು ಯೋಜನೆ ಜಾರಿಗೆ ಆಗ್ರಹಿಸಿ ಹಲವು ಸಂಘ ಸಂಸ್ಥೆ ಗಳು ಹೋರಾಟ ನಡೆಸಿದ್ದವು. ಆ ಪೈಕಿ ಕಸ್ತೂರಿ ಕರ್ನಾಟಕ ರಕ್ಷಣಾ ಸೇನೆ ಸಹ ಹೋರಾಟದಲ್ಲಿಪಾಲ್ಗೊಂಡು ಮೇಕೆ ದಾಟು ಯೋಜನೆ ಗಾಗಿ ಆಗ್ರಹಿಸಿತ್ತು. ಮೇಕೆದಾಟು ಯೋಜನೆಗೆ ಅಂದು ಕಾಂಗ್ರೆಸ್ಸಿನವರು ಪಾದಯಾತ್ರೆ ಕೈಗೊಂಡಿ ದ್ದರು. ಇದೀಗ ಅವರೇ ಅಧಿಕಾರದಲ್ಲಿದ್ದು ಕೂಡಲೇ ಕಾಮಗಾರಿ ಪ್ರಾರಂಭಿಸಬೇಕು ಎಂದರು.