ಭಕ್ತರಿಗೆ ಪ್ರಸಾದ ವಿತರಣೆ
ಇಂಡಿ: ಕಲಬುರಗಿ ಜಿಲ್ಲೆಯ ಗಾಣಗಾಪುರದಲ್ಲಿಬುಧವಾರ ನಡೆಯುವ ದತ್ತ ಜಯಂತಿ ನಿಮಿತ್ತ ಮಹಾರಾಷ್ಟ್ರ ಮತ್ತು ಇಂಡಿ ತಾಲೂಕಿನ ಭಕ್ತರು ಪಾದಯಾತ್ರೆ ಮೂಲಕ ಸುಕ್ಷೇತ್ರಕ್ಕೆ ಹೊರಟಿದ್ದಾರೆ. ಪಟ್ಟಣ ಮಾರ್ಗವಾಗಿ ತೆರಳುತ್ತಿರುವ ಭಕ್ತರಿಗೆ ಸಿಂದಗಿ ರಸ್ತೆಯಲ್ಲಿಪ್ರಸಾದ ವಿತರಿಸಲಾಯಿತು.
ತೆರಿಗೆ ಸಲಹೆಗಾರ ಟಿ.ಎಚ್ .ಬಿರಾದಾರ ವಕೀಲರು, ಸದಾನಂದ ಬಿರಾದಾರ, ಮಲ್ಲಿಕಾರ್ಜುನ ದೇವರ, ವಿರೇಶ ಮಹಾಜನಶೆಟ್ಟಿ, ಶಾಂತೇಶ ಬಿರಾದಾರ, ರಾಘವೇಂದ್ರ ಬಿರಾದಾರ, ಅರವಿಂದ ಯಂಕಂಚಿ, ಪುಂಡಲೀಕ ಕರ್ಜಗಿ ಮತ್ತಿತರರು ಪ್ರಸಾದ ವ್ಯವಸ್ಥೆಯ ನೇತೃತ್ವ ವಹಿಸಿದ್ದರು.
ಫೋಟೋ- 30 ಇಂಡಿ 05
ಇಂಡಿ ಪಟ್ಟಣದ ಸಿಂದಗಿ ರಸ್ತೆಯಲ್ಲಿಭಕ್ತರಿಗೆ ಪ್ರಸಾದ ವಿತರಣೆ ನಡೆಯಿತು.

