ಲಂಚಕ್ಕೆ ಬೇಡಿಕೆ ಆರೋಪ: ಆರ್ ಟಿಒ ವರ್ಗಾವಣೆ

Contributed bynaikharsha6@gmail.com|Vijaya Karnataka

ರಾಮನಗರದ ಪ್ರಾದೇಶಿಕ ಸಾರಿಗೆ ಅಧಿಕಾರಿ ಸಿ.ಎಂ. ಕೃಷ್ಣೇಗೌಡ ಅವರನ್ನು ಮಂಡ್ಯಕ್ಕೆ ವರ್ಗಾವಣೆ ಮಾಡಲಾಗಿದೆ. ಶಾಲಾ ಬಸ್‌ಗೆ ವಿಎಲ್‌ಟಿಡಿ ಅನುಮೋದನೆ ನೀಡಲು 1 ಸಾವಿರ ರೂಪಾಯಿ ಲಂಚ ಕೇಳಿದ ಆರೋಪ ಕೇಳಿಬಂದಿದೆ. ಈ ಬಗ್ಗೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸಾರಿಗೆ ಇಲಾಖೆ ಆಯುಕ್ತರು ಪರಿಶೀಲನೆ ನಡೆಸಿ ಈ ಆದೇಶ ಹೊರಡಿಸಿದ್ದಾರೆ.

rto officer demands bribe approval for school buses

ರಾಮನಗರ: ಶಾಲಾ ಬಸ್ ಗೆ ವಿಎಲ್ ಟಿಡಿ (ವಾಹನದ ಸ್ಥಳ ಟ್ರ್ಯಾಕಿಂಗ್ ಸಾಧನ) ಅನುಮೋದನೆ ನೀಡಲು 1 ಸಾವಿರ ರೂ.ಗೆ ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪದ ಮೇರೆಗೆ, ಇಲ್ಲಿನ ಪ್ರಾದೇಶಿಕ ಸಾರಿಗೆ ಅಧಿಕಾರಿ ಸಿ.ಎಂ. ಕೃಷ್ಣೇಗೌಡ ಅವರನ್ನು ಮಂಡ್ಯ ಪ್ರಾದೇಶಿಕ ಸಾರಿಗೆ ಕಚೇರಿಗೆ ಬುಧವಾರ ವರ್ಗಾವಣೆ ಮಾಡಲಾಗಿದೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಉಸ್ತುವಾರಿಯಾಗಿರುವ ಜಿಲ್ಲೆಯಲ್ಲೇ ಇಂತಹದ್ದೊಂದು ಪ್ರಕರಣ ನಡೆದಿದೆ.

ಸಿಬ್ಬಂದಿಯೊಬ್ಬರು ತಮ್ಮ ಶಾಲೆಯ ಬಸ್ ನ ವಿಎಲ್ ಟಿಡಿಗೆ ಅನುಮೋದನೆ ಪಡೆಯುವುದಕ್ಕಾಗಿ ಆರ್ ಟಿಒ ಕೃಷ್ಣೇಗೌಡ ಅವರನ್ನು ಮಂಗಳವಾರ ಭೇಟಿ ಮಾಡಿದ್ದರು. ಆಗ ಕೃಷ್ಣೇಗೌಡ ಅವರು ತಲಾ 500 ರೂಪಾಯಿಯಂತೆ 1 ಸಾವಿರ ಮಾಮೂಲಿ ಕೊಟ್ಟರೆ, ನಿಮ್ಮ ಕೆಲಸ ಬೇಗನೆ ಆಗುತ್ತದೆ ಎಂದು ಹಣಕ್ಕೆ ಬೇಡಿಕೆ ಇಟ್ಟಿದ್ದರು.

ಸಿಬ್ಬಂದಿ ಜತೆಗೆ ಬಂದಿದ್ದ ವ್ಯಕ್ತಿಯೊಬ್ಬರು ಆರ್ ಟಿಒ ಲಂಚ ಕೇಳಿದ್ದನ್ನು ತಮ್ಮ ಮೊಬೈಲ್ ನಲ್ಲಿವಿಡಿಯೊ ಮಾಡಿದ್ದರು. ಜಿಪಿಎಸ್ ಆಧಾರಿತ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿಹರಿದಾಡಿತ್ತು. ಈ ಕುರಿತು, ಪರಿಶೀಲಿಸಿ ವರದಿ ನೀಡುವಂತೆ ಸಾರಿಗೆ ಇಲಾಖೆಯ ಆಯುಕ್ತರು ಬೆಂಗಳೂರು ಗ್ರಾಮಾಂತರ ವಿಭಾಗದ ಜಂಟಿ ಆಯುಕ್ತರಿಗೆ ಸೂಚಿಸಿದ್ದರು. ಇದರ ಬೆನ್ನಲ್ಲೇ ಕೃಷ್ಣೇಗೌಡ ಅವರನ್ನು ಮಂಡ್ಯ ಆರ್ ಟಿಒಗೆ ವರ್ಗಾವಣೆ ಮಾಡಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಫೋಟೋ:

05ಆರ್ ಎನ್ ಆರ್ ಎಚ್ 07

ಸಿ.ಎಂ.ಕೃಷ್ಣೇಗೌಡ, ಆರ್ ಟಿ ಒ ಅಧಿಕಾರಿ