ಕಬ್ಬಿಗೆ 3,500 ರೂ. ದರ ನಿಗದಿ ಮಾಡಿ

Contributed byvkyadramipress@gmail.com|Vijaya Karnataka

ಯಡ್ರಾಮಿ ತಾಲೂಕಿನ ನಾಗರಹಳ್ಳಿಯಲ್ಲಿ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸಿದರು. ಪ್ರತಿ ಟನ್‌ ಕಬ್ಬಿಗೆ 3,500 ರೂ. ದರ ನಿಗದಿ ಮಾಡಬೇಕು ಎಂದು ರೈತರು ಆಗ್ರಹಿಸಿದರು. ಕೃಷಿ ವೆಚ್ಚ ಹೆಚ್ಚಳವಾಗುತ್ತಿದ್ದು, ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಬೆಲೆ ನೀಡಬೇಕು ಎಂದು ಒತ್ತಾಯಿಸಿದರು. ಬಾಕಿ ಇರುವ ಕಬ್ಬಿನ ಬಿಲ್ ತಕ್ಷಣ ಪಾವತಿಸುವಂತೆ ಒತ್ತಾಯಿಸಲಾಯಿತು. ರೈತರು ಅಹೋರಾತ್ರಿ ಧರಣಿ ಆರಂಭಿಸಿದರು.

fixed price of 3500 for sugarcane farmers protest

.ಚಿತ್ರ7ವೈಡಿಮ್ 1:

ಕಬ್ಬಿಗೆ 3,500 ರೂ. ದರ ನಿಗದಿಗೆ ಆಗ್ರಹಿಸಿ,ಯಡ್ರಾಮಿ ತಾಲೂಕಿನ ನಾಗರಹಳ್ಳಿದ ಬಸವೇಶ್ವರ ವೃತ್ತದಲ್ಲಿರೈತರು ಪ್ರತಿಭಟನೆ ನಡೆಸಿದರು.

ಕಬ್ಬಿಗೆ 3,500 ರೂ. ದರ ನಿಗದಿ ಮಾಡಿ

ವಿಕಸುದ್ದಿಲೋಕ ಸುದ್ದಿಲೋಕ ಯಡ್ರಾಮಿ

ಪ್ರತಿ ಟನ್ ಕಬ್ಬಿಗೆ 3,500 ರೂ. ದರ ನಿಗದಿ ಸೇರಿ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ, ವಿವಿಧ ಸಂಘಟನೆಗಳ ನೇತೃತ್ವದಲ್ಲಿಕಬ್ಬು ಬೆಳೆಗಾರರು ತಾಲೂಕಿನ ನಾಗರಹಳ್ಳಿ ಶುಕ್ರವಾರ ಪ್ರತಿಭಟನಾ ರಾರ ಯಲಿ ನಡೆಸಿ, ಅಹೋರಾತ್ರಿ ಧರಣಿ ಆರಂಭಿಸಿದರು. ನಾಗರಹಳ್ಳಿ ಗ್ರಾಮದ ಸ್ವಾತಂತ್ರ ಹೋರಾಟಗಾರ ಸಿದ್ದರಾಮಯ್ಯ ಹಿರೇಮಠ ಚೌಕ್ ದಲ್ಲಿನೆರೆದ ರೈತರು ಬಸವೇಶ್ವರ ವೃತ್ತ, ಡಾ.ಬಿ.ಆರ್ .ಅಂಬೇಡ್ಕರ್ ಸರ್ಕಲ್ ಮೂಲಕ ಸಕ್ಕರೆ ಕಾರ್ಖಾನೆ ಆವರಣದಲ್ಲಿಬೃಹತ್ ಪ್ರತಿಭಟನೆ ನಡೆಸಿ, ರಾಜ್ಯ ಹಾಗೂ ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದರು. ಮುಖಂಡರು, ಕಬ್ಬು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಚುನಾವಣೆಯ ಸಂದರ್ಭದಲ್ಲಿಮಾತ್ರ ರೈತರ ಕಷ್ಟ ಗೊತ್ತಾಗಲಿದೆ. ಪ್ರಕೃತಿ ವಿಕೋಪದ ನಡುವೆಯೂ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಯಾವ ಜನಪ್ರತಿನಿಧಿಯೂ ರೈತರ ಬಗ್ಗೆ ಧ್ವನಿ ಎತ್ತುತ್ತಿಲ್ಲಎಂದು ತಾಲೂಕ ಅಧ್ಯಕ್ಷರು ಈರಣ್ಣ ಭಜಂತ್ರಿ ಆರೋಪಿಸಿದರು.

ಕೃಷಿ ಉತ್ಪಾದನಾ ವೆಚ್ಚ ಹೆಚ್ಚಳವಾಗುತ್ತಿದೆ. ಆದ್ದರಿಂದ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಪ್ರತಿ ಟನ್ ಕಬ್ಬಿಗೆ 3,500 ರೂ. ಘೋಷಣೆ ಮಾಡಿ ಸಕ್ಕರೆ ಕಾರ್ಖಾನೆಗಳನ್ನು ಪ್ರಾರಂಭ ಮಾಡಬೇಕು ಎಂದು ಹೋರಾಟಗಾರರು ಆಗ್ರಹಿಸಿದರು. ಸಕ್ಕರೆ ಜತೆಗೆ ಉಪ ಉತ್ಪನ್ನಗಳಿಂದ ಹೆಚ್ಚಿನ ಲಾಭ ಪಡೆಯುತ್ತಿರುವ ಕಾರ್ಖಾನೆಗಳು ಕಬ್ಬಿಗೆ ಮಾತ್ರ ಕಡಿಮೆ ದರ ಕೊಡುವುದು ನ್ಯಾಯವೇ ? ಬಾಕಿ ಉಳಿಸಿಕೊಂಡಿರುವ ಕಬ್ಬಿನ ಬಿಲ್ ತಕ್ಷಣ ಪಾವತಿಸಬೇಕು ಎಂದು ಸಾಹೇಬಗೌಡ ದೇಸಾಯಿ ಒತ್ತಾಯಿಸಿದರು.

ಈ ಪ್ರತಿಭಟನೆಯಲ್ಲಿಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷರು ಈರಣ್ಣ ಭಜಂತ್ರಿ, ಸಾಹೇಬಗೌಡ ದೇಸಾಯಿ, ಶಫೀಕ್ ಉಲ್ಲದಖ್ನಿ, ಸಾಂಬಶಿವಯ್ಯ ಹಿರೇಮಠ, ತಾಪಂ ಮಾಜಿ ಸದಸ್ಯ ಮಲ್ಲನಗೌಡ ಪಾಟೀಲ್ , ಮಲ್ಲನಗೌಡ ಮಾಲಿ ಪಾಟೀಲ್ ಮಳ್ಳಿ, ದಂಡಪ್ಪ ಸಾವು ಕುಳಗೇರಿ, ಮಲ್ಲನಗೌಡ ಬಿರಾದಾರ, ಸಂತೋಷ ಯಾದಗಿರಿ ಮಳ್ಳಿ, ಸಾಹೇಬ ಪಟೇಲ್ ತಿಳಗೋಳ ಕುಳಗೇರಿ, ಫಯಾಜ್ ಪಟೇಲ್ ಹಸರಗುಂಡಗಿ, ಮಾದೇವಿ ಬೇವಿನಮಠ ಹುಣಸಗಿ, ದೇವಿಂದ್ರ ಮಾಣ್ಶಿಣಗಿ, ಹನುಮಂತ ಕೂಡ್ಗಿ, ಬಸವರಾಜ ಹೂಗಾರ ಯಡ್ರಾಮಿ, ಬಸಲಿಂಗಪ್ಪ ಸಾಹು ನಾಗನೂರು ಸೇರಿ ನೂರಾರು ರೈತರು ಪ್ರತಿಭಟನೆಯಲ್ಲಿಪಾಲ್ಗೊಂಡಿದ್ದರು.