ಆಯುಷ್ ಚಿಕಿತ್ಸಾ ಶಿಬಿರ

Contributed bykvkampli@gmail.com|Vijaya Karnataka

ಕಂಪ್ಲಿ ತಾಲೂಕಿನ ಶ್ರೀರಾಮರಂಗಾಪುರದಲ್ಲಿ ಉಚಿತ ಆಯುಷ್‌ ಚಿಕಿತ್ಸಾ ಶಿಬಿರ ಯಶಸ್ವಿಯಾಗಿ ನಡೆಯಿತು. ಆಯುರ್ವೇದ ಚಿಕಿತ್ಸೆಯ ಮಹತ್ವವನ್ನು ವೈದ್ಯಾಧಿಕಾರಿಗಳು ತಿಳಿಸಿದರು. ಶಿಬಿರದಲ್ಲಿ 80ಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಣೆ ಮಾಡಲಾಯಿತು. ರಕ್ತಪರೀಕ್ಷೆ, ರಕ್ತದೊತ್ತಡ ಪರೀಕ್ಷೆ ನಡೆಸಿ, ಔಷಧಗಳನ್ನು ವಿತರಿಸಲಾಯಿತು. ಗರ್ಭಕಂಠ ಕ್ಯಾನ್ಸರ್ ತಡೆಗೆ ಲಸಿಕೆ ಬಗ್ಗೆಯೂ ಮಾಹಿತಿ ನೀಡಲಾಯಿತು.

ayurveda treatment ayush camp held for health

ಆಯುಷ್ ಚಿಕಿತ್ಸಾ ಶಿಬಿರ

ಕಂಪ್ಲಿ: ತಾಲೂಕಿನ ಶ್ರೀರಾಮರಂಗಾಪುರದ ಸರಕಾರಿ ಆಯುರ್ವೇದ ಚಿಕಿತ್ಸಾಲಯದಲ್ಲಿಉಚಿತ ಆಯುಷ್ ಚಿಕಿತ್ಸಾ ಶಿಬಿರ ಗುರುವಾರ ನಡೆಯಿತು.

ಚಿಕಿತ್ಸಾಲಯದ ಪ್ರಭಾರ ವೈದ್ಯಾಧಿಕಾರಿ ಡಾ.ಶ್ರೀಗುರು ಮಾತನಾಡಿ, ‘‘ಪ್ರಸ್ತುತದಿನದಲ್ಲಿ ಆಯುರ್ವೇದ ಚಿಕಿತ್ಸೆ ಗೆ ಜನತೆ ಉತ್ಸುಕರಾಗಿದ್ದಾರೆ. ಅಡುಗೆ ಮನೆಯಲ್ಲಿಯೇ ದೊರೆಯುವ ದಿನ ಬಳಕೆ ವಸ್ತುಗಳಲ್ಲಿಆರೋಗ್ಯದ ಗುಟ್ಟು ಅಡಗಿದೆ. ಆಯುರ್ವೇದ ಚಿಕಿತ್ಸೆ ಪರಿಣಾಮಕಾರಿಯಾಗಿದ್ದು, ಸದ್ಭಳಕೆ ಮಾಡಿಕೊಳ್ಳಬೇಕು,’’ ಎಂದರು.

ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಭರತ್ ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ, ‘‘ಗರ್ಭಕಂಠ ಕ್ಯಾನ್ಸರ್ ತಡೆಗಾಗಿ ಕಿಶೋರಿಯರಿಗೆ ಎಚ್ ಪಿವಿ ಲಸಿಕೆ ಹಾಕಿಸುವಲ್ಲಿಪಾಲಕರು ಆಸಕ್ತಿವಹಿಸಬೇಕು,’’ ಎಂದರು.

ಶಿಬಿರದಲ್ಲಿ80ಕ್ಕೂ ಹೆಚ್ಚಿನ ರೋಗಿಗಳ ಆರೋಗ್ಯ ತಪಾಸಣೆ ಮಾಡಿ, ರಕ್ತಪರೀಕ್ಷೆ, ರಕ್ತದೊತ್ತಡ ಪರೀಕ್ಷೆ ಮಾಡಲಾಯಿತು. ಔಷಧ ವಿತರಿಸಲಾಯಿತು. ಸಿಬ್ಬಂದಿ ಗೌರಿ ಶಂಕರ, ಮಲ್ಲಿಕಾರ್ಜುನ, ಮಮತಾ, ಆಶಾ ಕಾರ್ಯಕರ್ತೆ ಅನಿತಾ, ಜ್ಯೋತಿ, ಮಹೇಶ್ವರಮ್ಮ, ಆಲ್ತಾಫ್ , ರಾಜಾ ಇದ್ದರು.

* ಪೊ.ಶೀ.9ಕೆಎಂಪಿ2;-

ಕಂಪ್ಲಿತಾಲೂಕಿನ ಶ್ರೀರಾಮರಂಗಾಪುರದ ಸರಕಾರಿ ಆಯುರ್ವೇದ ಚಿಕಿತ್ಸಾಲಯದಲ್ಲಿಉಚಿತ ಆಯುಷ್ ಚಿಕಿತ್ಸಾ ಶಿಬಿರ ನಡೆಯಿತು.