ವಿಕ ಸುದ್ದಿಲೋಕ ಮಂಡ್ಯ
ಕಂದಾಯ ಇಲಾಖಾ ನೌಕರರ ಸಂಘದ ಮಂಡ್ಯ ತಾಲೂಕು ಘಟಕದ ಅಧ್ಯಕ್ಷರಾಗಿ ಕಂದಾಯ ನಿರೀಕ್ಷಕ ಸಿ.ಪ್ರಭು ಅವರು ಆಯ್ಕೆಯಾಗಿದ್ದಾರೆ.
ನಗರದಲ್ಲಿನ ಜಿಲ್ಲಾ ಕಂದಾಯ ಇಲಾಖೆ ನೌಕರರ ಭವನದಲ್ಲಿನಡೆದ ಮಂಡ್ಯ ತಾಲೂಕು ಕಂದಾಯ ಇಲಾಖೆ ನೌಕರರ ಸಂಘದ ಪುನರ್ ರಚನೆ ಸಭೆಯಲ್ಲಿಸಿ.ಪ್ರಭು ಅವರನ್ನು ನೂತನ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಜಿಲ್ಲಾಕಂದಾಯ ಇಲಾಖೆ ನೌಕರರ ಸಂಘದ ಗೌರವಾಧ್ಯಕ್ಷ ಡಿ.ತಮ್ಮಣ್ಣಗೌಡ, ಜಿಲ್ಲಾಧ್ಯಕ್ಷ ಎಚ್ .ಮಂಜುನಾಥ್ ಅವರ ನೇತೃತ್ವದಲ್ಲಿಆಯ್ಕೆ ಪ್ರಕ್ರಿಯೆ ನಡೆಯಿತು.
ಮಂಡ್ಯ: ಫೋಟೋ ಶೀರ್ಷಿಕೆಗಳು...
ಎಂಡಿವೈ8ಎನ್ 1
ಕಂದಾಯ ಇಲಾಖಾ ನೌಕರರ ಸಂಘದ ಮಂಡ್ಯ ತಾಲೂಕು ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಕಂದಾಯ ನಿರೀಕ್ಷಕ ಸಿ.ಪ್ರಭು ಅವರನ್ನು ಪದಾಧಿಕಾರಿಗಳು ಮತ್ತು ಸದಸ್ಯರು ಅಭಿನಂದಿಸಿದರು.

