ದಿನಭವಿಷ್ಯ 14 ಏಪ್ರಿಲ್ 2026

Contributed bynetravati.krishnamurthy@timesgroup.com|Vijaya Karnataka

ಏಪ್ರಿಲ್ 14, 2026 ರಂದು ಮೇಷ, ಕಟಕ, ತುಲಾ, ಮಕರ ರಾಶಿಯವರಿಗೆ ವಾಹನ ಯೋಗವಿದೆ. ಗಣ್ಯವ್ಯಕ್ತಿಗಳಿಂದ ಧನಾಗಮನವಾಗಲಿದೆ. ವೃಷಭ ರಾಶಿಯವರು ತಂದೆಯ ಮಾತಿನಂತೆ ನಡೆದರೆ ಶ್ರೇಯಸ್ಸು ಲಭಿಸಲಿದೆ. ಮಿಥುನ ರಾಶಿಯವರಿಗೆ ಮಗನ ಮದುವೆ ವಿಚಾರದಲ್ಲಿ ಅನುಕೂಲವಾಗಲಿದೆ. ಕಟಕ ರಾಶಿಯವರಿಗೆ ಮಕ್ಕಳೊಂದಿಗೆ ವ್ಯವಹಾರದ ಬಗ್ಗೆ ಮಾತುಕತೆ ನೆಮ್ಮದಿ ತರಲಿದೆ. ಸಿಂಹ ರಾಶಿಯವರು ಭೂಮಿ ಖರೀದಿಯ ಪ್ರಯತ್ನದಲ್ಲಿ ನಷ್ಟ ತಪ್ಪಿಸಬಹುದು. ಕನ್ಯಾ ರಾಶಿಯವರಿಗೆ ಸ್ವತ್ತು ಖರೀದಿ ವಿಚಾರದಲ್ಲಿ ಮಾತುಕತೆ ನಡೆಯಲಿದೆ. ತುಲಾ ರಾಶಿಯವರಿಗೆ ವ್ಯಾಪಾರ, ವ್ಯವಹಾರಗಳ ಬಗ್ಗೆ ಗಮನ ನೀಡಬೇಕಾದ ಪರಿಸ್ಥಿತಿ ಎದುರಾಗಲಿದೆ.

world future in your hands on april 14 2026

ದಿನಭವಿಷ್ಯ 14 ಏಪ್ರಿಲ್ 2026

ಶ್ರೀಪತಿ ಭಟ್ | ಬೆಂಗಳೂರು

ಧಿಧಿಧಿ-------

(ಮೇಷ, ಕಟಕ, ತುಲಾ, ಮಕರ-ಈ ನಾಲ್ಕು ರಾಶಿಯವರಿಗೆ ವಾಹನ ಯೋಗ, ಗಣ್ಯವ್ಯಕ್ತಿಗಳಿಂದ ಧನಾಗಮನ)

----

ಮೇಷ :ಬಹುಕಾಲದಿಂದ ಅನುಭವಿಸುತ್ತಿರುವ ರೋಗಬಾಧೆ ಹಂತ ಹಂತವಾಗಿ ಚೇತರಿಕೆಯ ಮೆಟ್ಟಿಲನ್ನು ನೋಡಲಿದೆ. ಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಿವಾಹ ಯೋಗ ಕೂಡಿ ಬರುವುದು.

(ಶುಭ ಸಂಖ್ಯೆ :8, ಅದೃಷ್ಟ ಬಣ್ಣ : ಗುಲಾಬಿ)

--------

ವೃಷಭ : ತಂದೆಯವರ ಮಾತಿನಂತೆ ನಡೆಯುವುದರಿಂದ ಶ್ರೇಯಸ್ಸು ಲಭಿಸಲಿದೆ. ಉದಯೋನ್ಮುಖ ತಾರೆಯರಿಗೆ ಲಾಭ ಬರಲಿದೆ. ಯಾವುದೇ ಕೆಲಸವನ್ನು ಮಾಡಿದರೂ ಆಲೋಚಿಸಿ ಮಾಡುವುದು ಒಳ್ಳೆಯದು.

(ಶುಭ ಸಂಖ್ಯೆ : 6, ಅದೃಷ್ಟ ಬಣ್ಣ : ಹಸಿರು)

-----------

ಮಿಥುನ: ಸಮಾರಂಭದಲ್ಲಿಭಾಗವಹಿಸುವುದರಿಂದ ಮಗನ ಮದುವೆಯ ವಿಚಾರದಲ್ಲಿಅನುಕೂಲವಾಗುವುದು. ವೈಯಕ್ತಿಕ ಪ್ರಗತಿಯಿಂದ ಮನಸ್ಸಿಗೆ ನೆಮ್ಮದಿ. ಹಣದ ಮೇಲಿನ ದುರಾಸೆಗೆ ಕೆಲಸ ಮಾಡಬೇಡಿ.

(ಶುಭ ಸಂಖ್ಯೆ : 3, ಅದೃಷ್ಟ ಬಣ್ಣ : ನೀಲಿ)

---------------

ಕಟಕ: ಮಕ್ಕಳೊಂದಿಗೆ ವ್ಯವಹಾರದ ವಿಚಾರಗಳ ಬಗ್ಗೆ ಸುದೀರ್ಘ ಮಾತುಕತೆ ನಡೆಸುವುದರಿಂದ ನೆಮ್ಮದಿ ಪ್ರಾಪ್ತಿ. ಕೌಟುಂಬಿಕವಾಗಿ ಹೊಸ ಜವಾಬ್ದಾರಿಯೊಂದನ್ನು ನಿಭಾಯಿಸಬೇಕಾಗುವುದು.

(ಶುಭ ಸಂಖ್ಯೆ : 1, ಅದೃಷ್ಟ ಬಣ್ಣ : ಕೇಸರಿ)

---------------

ಸಿಂಹ : ಸ್ನೇಹಿತರೊಂದಿಗೆ ಭೂಮಿ ಖರೀದಿಯ ಪ್ರಯತ್ನ ನಡೆಸುವುದು ನಷ್ಟ ತಪ್ಪಿಸುತ್ತದೆ. ಕೆಲಸ ಬದಲಿಸುವ ಯೋಜನೆಯಿಂದ ಹೊರ ಬರುವುದು ಉತ್ತಮ. ಶಿರೋವೇದನೆ ಎದುರಾಗಬಹುದು.

(ಶುಭ ಸಂಖ್ಯೆ : 4, ಅದೃಷ್ಟ ಬಣ್ಣ : ಹಳದಿ)

-------------------

ಕನ್ಯಾ : ಸ್ವತ್ತು ಖರೀದಿ ಮಾಡುವ ವಿಚಾರದಲ್ಲಿಯಾವುದಾದರು ಗೃಹ ಸಮಾರಂಭದಲ್ಲಿನಾಲ್ಕಾರು ಜನರ ಮಧ್ಯ ಮಾತುಗಳು ಬರಲಿವೆ. ಗುಪ್ತಚರ ಇಲಾಖೆ ಉದ್ಯೋಗಿಗಳಿಗೆ ಸರಕಾರದಿಂದ ಪ್ರಶಸ್ತಿ ದೊರೆಯಬಹುದು.

(ಶುಭ ಸಂಖ್ಯೆ : 9, ಅದೃಷ್ಟ ಬಣ್ಣ : ನೇರಳೆ)

-------------

ತುಲಾ : ಅಧಿಕ ಕೌಟುಂಬಿಕ ಒತ್ತಡಗಳ ಮಧ್ಯೆ ವ್ಯಾಪಾರ, ವ್ಯವಹಾರಗಳ ಬಗ್ಗೆ ಗಮನ ನೀಡಬೇಕಾದ ಬಿಗಿ ಪರಿಸ್ಥಿತಿ ಬರುವುದು. ಧಾರ್ಮಿಕ ಕಾರ್ಯಗಳಲ್ಲಿಪಾಲ್ಗೊಳ್ಳುವ ಮನಸ್ಥಿತಿ ಉಂಟಾಗುತ್ತದೆ.

(ಶುಭ ಸಂಖ್ಯೆ : 5, ಅದೃಷ್ಟ ಬಣ್ಣ : ಬಿಳಿ)

----------

ವೃಶ್ಚಿಕ: ಅನಿವಾರ್ಯ ಸಂದರ್ಭ ಉಂಟಾದ ಕಾರಣದಿಂದ ಭಾಗವಹಿಸಿದ ಕಾರ್ಯಕ್ರಮಗಳಲ್ಲಿಮಾತುಗಳನ್ನು ಕೇಳಿದ ಜನರಲ್ಲಿನಿಮಗೆ ಅನುಯಾಯಿಗಳು ದೊರೆಯುವರು. ದಲ್ಲಾಳಿಗಳಿಗೆ ಲಾಭ ಆಗುವುದು.

(ಶುಭ ಸಂಖ್ಯೆ :2, ಅದೃಷ್ಟ ಬಣ್ಣ : ಕೆಂಪು)

----------

ಧನು : ಸಂಬಂಧಿಗಳು ಹಳೆಯ ವ್ಯಾಜ್ಯಗಳನ್ನು ಮರೆತು ಸಂಬಂಧ ಉಳಿಸಿಕೊಳ್ಳುವ ದೃಷ್ಟಿಯಿಂದ ಬಂದಾರು. ಛಾಯಾಗ್ರಾಹಕರಿಗೆ ಅಥವಾ ಚಿತ್ರೀಕರಣದವರಿಗೆ ವೃತ್ತಿಯಲ್ಲಿಅನುಭವದ ಕೊರತೆ ಕಾಣುವುದು.

(ಶುಭ ಸಂಖ್ಯೆ :7, ಅದೃಷ್ಟ ಬಣ್ಣ : ಕಪ್ಪು)

----------

ಮಕರ :ದೂರ ಪ್ರಯಾಣ ಮಾಡುವ ಅನಿವಾರ್ಯತೆ ಬಂದಲ್ಲಿರಾಹುಕಾಲದ ನಂತರ ಪ್ರಯಾಣ ಬೆಳೆಸಿ. ಸುವರ್ಣ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ. ಕೌಟುಂಬಿಕ ಸಮಯ ದೊರೆಯಲಿದೆ.

(ಶುಭ ಸಂಖ್ಯೆ :3, ಅದೃಷ್ಟ ಬಣ್ಣ : ಬೂದು)

-------------

ಕುಂಭ :ಕೆಲಸದ ಒತ್ತಡದಿಂದ ಉಂಟಾಗುತ್ತಿರುವ ಶರೀರ ಬಾಧೆಗಳನ್ನು ನಿವಾರಿಸಿಕೊಳ್ಳಲೆಂದು ತೆಗೆದುಕೊಳ್ಳುವ ಔಷಧಗಳು ವಿಷವಾಗಲಿದೆ. ಬರವಣಿಗೆ ಮತ್ತು ಮುದ್ರಣ ಕೆಲಸಗಳನ್ನು ಮಾಡುವವರಿಗೆ ವರಮಾನ ತರಲಿದೆ.

(ಶುಭ ಸಂಖ್ಯೆ :8, ಅದೃಷ್ಟ ಬಣ್ಣ : ಕಿತ್ತಳೆ)

-----------

ಮೀನ: ಬೇರೆಯವರ ಸಹಾಯ ಪಡೆಯದೇ ಶ್ರಮದಿಂದಲೇ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ. ಹಿರಿಯರ ಅನುಗ್ರಹದಿಂದ ಇಷ್ಟಾರ್ಥಸಿದ್ಧಿಯಾಗಿ ಕ್ರಯ-ವಿಕ್ರಯದಲ್ಲಿಲಾಭ ತರಲಿದೆ. ಸಂತೋಷದ ಘಟನೆಗಳು ನಡೆಯಲಿವೆ.

(ಶುಭ ಸಂಖ್ಯೆ 5, ಅದೃಷ್ಟ ಬಣ್ಣ : ಖಾಕಿ)