ದಿನಭವಿಷ್ಯ 17 ಏಪ್ರಿಲ್ 2026

Contributed bynetravati.krishnamurthy@timesgroup.com|Vijaya Karnataka

17 ಏಪ್ರಿಲ್ 2026ರ ದಿನಭವಿಷ್ಯ ಇಲ್ಲಿದೆ. ಮೇಷ ರಾಶಿಯವರು ವಿಷಯಗಳನ್ನು ಗೌಪ್ಯವಾಗಿಡಬೇಕು. ವೃಷಭ ರಾಶಿಯವರಿಗೆ ಆರೋಗ್ಯ ಸುಧಾರಿಸಿ ನೆಮ್ಮದಿ ಸಿಗಲಿದೆ. ಮಿಥುನ ರಾಶಿಯವರು ತಪ್ಪುಗಳನ್ನು ಪುನರಾವರ್ತಿಸದಂತೆ ಎಚ್ಚರ ವಹಿಸಬೇಕು. ಕಟಕ, ಧನು, ಮಕರ ರಾಶಿಯವರಿಗೆ ಗುಪ್ತ ಧನ ಯೋಗವಿದೆ. ಸಿಂಹ ರಾಶಿಯವರು ನಿರ್ಧಾರ ತೆಗೆದುಕೊಳ್ಳುವ ಮುನ್ನ ಸಂಗಾತಿಯ ಒಪ್ಪಿಗೆ ಪಡೆಯಬೇಕು. ಕನ್ಯಾ ರಾಶಿಯವರು ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವರು. ತುಲಾ ರಾಶಿಯವರಿಗೆ ಸಂಕುಚಿತ ಮನೋಭಾವ ದೂರವಾಗಲಿದೆ. ವೃಶ್ಚಿಕ ರಾಶಿಯವರು ಟೀಕೆಗಳಿಗೆ ಕಿವಿಗೊಡಬಾರದು. ಧನು ರಾಶಿಯವರಿಗೆ ಶಿಕ್ಷಕ ವೃತ್ತಿಯಲ್ಲಿ ಹೆಮ್ಮೆಯ ಸಂದರ್ಭ ಬರಲಿದೆ.

april 17 2026 your horoscope

ದಿನಭವಿಷ್ಯ 17 ಏಪ್ರಿಲ್ 2026

ಶ್ರೀಪತಿ ಭಟ್ | ಬೆಂಗಳೂರು

(ಕಟಕ, ಧನು, ಮಕರ -ಈ ಮೂರು ರಾಶಿಯವರಿಗೆ ಗುಪ್ತ ಧನ ಯೋಗ)

ಧಿಧಿಧಿಧಿಧಿಧಿಧಿಧಿಧಿಧಿಧಿ---------------

ಮೇಷ : ವಿಷಯವನ್ನು ಗೌಪ್ಯವಾಗಿ ಇರಿಸಿದಲ್ಲಿಭವಿಷ್ಯದಲ್ಲಿತೊಂದರೆಯನ್ನು ಅನುಭವಿಸುವಂತೆ ಆಗುವುದು. ಉತ್ತಮ ಸಂಧಾನಕಾರರಾಗಿರುವ ನಿಮಗೆ ಇಂದಿನ ಸಮಸ್ಯೆ ಕಬ್ಬಿಣದ ಕಡಲೆ ಆಗಬಹುದು.

(ಶುಭ ಸಂಖ್ಯೆ : 3, ಅದೃಷ್ಟ ಬಣ್ಣ : ಕಪ್ಪು)

-----------

ವೃಷಭ: ಪರಿಸ್ಥಿತಿಗಳನ್ನು ಸುಧಾರಣೆಗೆ ತರುವ ಪ್ರಯತ್ನದಿಂದ ಕೆಲಸದ ಕಡೆಗೆ ಗಮನ ಕೊಡಲು ಸಾಧ್ಯವಾಗದಂತಾಗಲಿದೆ. ಆರೋಗ್ಯ ಸುಧಾರಿಸಿ ಮನಸ್ಸಿಗೆ ನೆಮ್ಮದಿ ಸಿಗುವುದು. ರೆಡಿಯೋದಲ್ಲಿಕಾರ್ಯಕ್ರಮಕ್ಕೆ ಕರೆ ಬರುವುದು.

(ಶುಭ ಸಂಖ್ಯೆ : 8, ಅದೃಷ್ಟ ಬಣ್ಣ : ಆಕಾಶ ನೀಲಿ)

-----------

ಮಿಥುನ : ತುಮುಲಗಳನ್ನು ಮನಸ್ಸಿಗೆ ಹತ್ತಿರವಾದವರಲ್ಲಿಹೇಳಿಕೊಳ್ಳುವುದರಿಂದ ಕಡಿಮೆಯಾಗುವುದು. ಹಿಂದೆ ಮಾಡಿದ ತಪ್ಪುಗಳು ಪುನರಾವರ್ತನೆಯಾಗದಂತೆ ಎಚ್ಚರವಹಿಸಿ.

(ಶುಭ ಸಂಖ್ಯೆ : 4, ಅದೃಷ್ಟ ಬಣ್ಣ : ಬೂದು)

-----------

ಕಟಕ: ಶ್ರಮಕ್ಕೆ ಸರಿಸಮಾನವಾದ ಧನಾಗಮನಕ್ಕೆ ಯಾವುದೇ ತೊಂದರೆ ಇಲ್ಲ. ಸ್ನೇಹಪರ ಮನೋಭಾವದಿಂದ ಸ್ಥಾನಮಾನಗಳು ಲಭಿಸಲಿವೆ. ಶ್ರೀಮಹಾ ಗಣಪತಿ ಆರಾಧನೆಯಿಂದ ಮನೋಕಾಮನೆಗಳು ಈಡೇರಲಿವೆ.

(ಶುಭ ಸಂಖ್ಯೆ : 9, ಅದೃಷ್ಟ ಬಣ್ಣ : ಕಿತ್ತಳೆ)

--------

ಸಿಂಹ :ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಸಂಗಾತಿಯಲ್ಲಿಒಪ್ಪಿಗೆ ಪಡೆಯಿರಿ. ಶುಭ ಕಾರ್ಯಗಳಿಗೆ ಅಥವಾ ಕ್ಷೇತ್ರ ದರ್ಶನಕ್ಕಾಗಿ ಖರ್ಚಿನ ಸಂಭವವಿರುವುದು. ಹಿರಿಯರ ಮಾರ್ಗದರ್ಶನ ಪಡೆಯುವುದು ಉತ್ತಮ.

(ಶುಭ ಸಂಖ್ಯೆ : 6, ಅದೃಷ್ಟ ಬಣ್ಣ : ಕಂದು)

----------

ಕನ್ಯಾ : ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಮತ್ತು ನ್ಯಾಯಸಮ್ಮತವಾಗಿ ಬಗೆಹರಿಸಿಕೊಳ್ಳುವಿರಿ. ನಿತ್ಯದ ಸಿಬ್ಬಂದಿ ವರ್ಗದವರಿಂದ ಸಹಕಾರ ನಿರೀಕ್ಷಿತಬೇಡಿ. ಸರಕಾರಿ ಗುತ್ತಿಗೆ ಕೆಲಸಗಳು ನಿಮ್ಮದಾಗಲಿವೆ.

(ಶುಭ ಸಂಖ್ಯೆ : 1, ಅದೃಷ್ಟ ಬಣ್ಣ : ನೀಲಿ

----------

ತುಲಾ : ನಡೆಯುವ ಕೆಲವು ಸೂಕ್ಷ್ಮವಾದ ಸನ್ನಿವೇಶಗಳು ಸಂಕುಚಿತ ಮನೋಭಾವನೆಯನ್ನು ದೂರ ಮಾಡುತ್ತದೆ. ಇದರಿಂದ ಎಲ್ಲವನ್ನು ಮತ್ತು ಎಲ್ಲರನ್ನೂ ಎದುರಿಸುವ ಮನೋಸ್ಥೆ ೖರ್ಯವನ್ನು ತಂದು ಕೊಡುತ್ತದೆ.

(ಶುಭ ಸಂಖ್ಯೆ : 5, ಅದೃಷ್ಟ ಬಣ್ಣ : ಹಸಿರು)

--------

ವೃಶ್ಚಿಕ : ಗೊತ್ತಿಲ್ಲದ ವಿಷಯವನ್ನು ಹಿರಿಯರ ಬಳಿ ಕೇಳಿ ತಿಳಿಯುವುದು ಅಗೌರವವೆಂದು ಭಾವಿಸಬೇಡಿ. ಯಾವುದೇ ಟೀಕೆಗಳಿಗೆ ಕಿವಿಯೊಡ್ಡ ಬೇಡಿ. ಪ್ರಾಮಾಣಿಕತೆಯಿಂದ ಕಾರ್ಯ ಮುಂದುವರಿಸಿ.

(ಶುಭ ಸಂಖ್ಯೆ :2, ಅದೃಷ್ಟ ಬಣ್ಣ : ಬಿಳಿ)

--------------

ಧನು : ಶಿಕ್ಷಕ ವೃತ್ತಿಯನ್ನು ಮಾಡುತ್ತಿರುವವರಿಗೆ ಹೆಮ್ಮೆಯ ಸಂದರ್ಭ ಬರಲಿದೆ. ಪತ್ನಿಯ ಸಹಕಾರದಿಂದ ಕೆಲಸಗಳು ಅಚ್ಚುಕಟ್ಟಾಗಿ ಮುಗಿಯಲಿವೆ. ಸಂತೃಪ್ತಿಯ ಜೀವನವನ್ನು ಮುನ್ನಡೆಸಿ.

(ಶುಭ ಸಂಖ್ಯೆ :7, ಅದೃಷ್ಟ ಬಣ್ಣ : ಪಚ್ಚೆ)

-------------

ಮಕರ : ವೃತ್ತಿಯಲ್ಲಿಸಹೋದ್ಯೋಗಿಗಳ ಮಾತಿನಂತೆ ನಡೆದುಕೊಳ್ಳುವುದು ಉತ್ತಮ. ಕಾರ್ಯದ ಒತ್ತಡದಿಂದ ಭೋಜನದ ಸಮಯದಲ್ಲಿವ್ಯತ್ಯಯಗಳು ಸಂಭವಿಸಬಹುದು. ಬಂಧನದ ಭೀತಿಯಿಂದ ಹೊರ ಬರುವಿರಿ.

(ಶುಭ ಸಂಖ್ಯೆ :3, ಅದೃಷ್ಟ ಬಣ್ಣ : ಹಳದಿ.)

-------------

ಕುಂಭ : ವೃತ್ತಿಯಲ್ಲಿಅನುಭವ ಮತ್ತು ಪರಿಶ್ರಮ ಸೂಕ್ತ ಸಮಯದಲ್ಲಿಬೆಳಕಿಗೆ ಬಂದು ಉಪಯೋಗವಾಗುವುದು. ಕಾರ್ಮಿಕರ ಬೇಡಿಕೆಗಳನ್ನು ಅಲ್ಲಗಳೆಯದೆ ಪರಿಶೀಲಿಸಿ ತೀರ್ಮಾನ ತೆಗೆದುಕೊಳ್ಳಿ.

(ಶುಭ ಸಂಖ್ಯೆ :4, ಅದೃಷ್ಟ ಬಣ್ಣ : ಕೆಂಪು)

-------------

ಮೀನ : ಸಮೀಪವರ್ತಿಗಳ ದುರ್ಬುದ್ಧಿಯಿಂದ ವ್ಯಾಪಾರ ವಹಿವಾಟುಗಳಲ್ಲಿವಂಚನೆ ಕಾರ್ಯ ನಡೆದಾವು. ಅತಿಯಾಗಿ ನಂಬಲು ಆಗದೆ ಇರುವುದು ಒಳ್ಳೆಯದು. ತಂಡವನ್ನು ನಿಭಾಯಿಸುವಲ್ಲಿಯಶಸ್ವಿಯಗುವಿರಿ.

(ಶುಭ ಸಂಖ್ಯೆ 8, ಅದೃಷ್ಟ ಬಣ್ಣ : ಗುಲಾಬಿ)